ತೀವ್ರ ಪ್ರತಿಭಟನೆ ನಡುವೆ ರೈತರನ್ನುದ್ದೇಶಿ ಮೋದಿ ಭಾಷಣ; ಮಹತ್ವದ ಘೋಷಣೆ ಸಾಧ್ಯತೆ!
First Published Dec 17, 2020, 8:18 PM ISTಕೇಂದ್ರ ಕೃಷಿ ಮಸೂದೆಗಳನ್ನು ಹಿಂಪಡೆಯಲು ರೈತರು ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ನವೆಂಬರ್ 26 ರಿಂದ ಆರಂಭಗೊಂಡಿರುವ ಪ್ರತಿಭಟನೆ ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ರೈತರು ಪಟ್ಟು ಬಿಡುತ್ತಿಲ್ಲ, ಕೇಂದ್ರ ಮಸೂದೆ ವಾಪಸ್ ಪಡೆಯುತ್ತಿಲ್ಲ. ಹೀಗಾಗಿ ಪ್ರತಿಭಟನೆ ತೀವ್ರಗೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ, ರೈತರನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಇಷ್ಟೇ ಅಲ್ಲ ಮಹತ್ವದ ಘೋಷಣೆ ನೀಡುವ ಸಾಧ್ಯತೆ ಇದೆ.