ಇಂಧೋರ್ ನಗರದ ಹೊರಗ, ಇಂಧೋರ್-ದೇವಾಸ್ ಹೈವೇ ಬಳಿ ನಗರ ಪಾಲಿಕೆಯ ಕಸದ ಗಾಡಿಯಲ್ಲಿ ಕೆಲ ಅನಾಥ ಹಾಗೂ ನಿರ್ಗತಿಕ ವೃದ್ಧರನ್ನು ಕರೆತಂದಿದೆ. ವೃದ್ಧರು ದಯವಿಟ್ಟು ನಮ್ಮನ್ನು ಇಲ್ಲಿ ಬಿಟ್ಟು ಬಿಡಬೇಡಿ, ಚಳಿಯಿಂದ ಸಾಯುತ್ತೇವೆಂದು ಬೇಡಿಕೊಂಡರೂ ಕೇಳದೆ ಕಸವೆಸೆದಂತೆ ಗಾಡಿಯಿಂದ ಹೊರಗೆ ದೂಡಿದ್ದಾರೆ. ಈ ಘಟನೆ ಕಂಡು ಅಲ್ಲಿನ ಸ್ಥಳೀಯರ ಮನ ಕರಗಿದೆ. ವೃದ್ಧರ ಬಳಿ ತೆರಳಿ ಅಧಿಕಾರಿಗಗಳ ಈ ವರ್ತನೆಗೇನು ಕಾರಣ ಎಂದು ಪ್ರಶ್ನಿಸಿದ್ದಾರೆ. ಆದರೆ ವೃದ್ಧರಿಗೆ ಏನು ಹೇಳುವುದೆಂದೇ ತೋಚದಾಗಿದೆ. ಅಧಿಕಾರಿಗಳ ಈ ನಡೆಯಿಂದ ಆಕ್ರೋಶಿತರಾದ ಸ್ಥಳೀಯರು ಇದೆಲ್ಲವನ್ನೂ ತಮ್ಮ ಫೋನ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಫೋಟೊ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ವೃದ್ಧರನ್ನು ಮತ್ತೆ ಗಾಡಿಗೇರಿಸಿ ಕರೆದೊಯ್ದಿದ್ದಾರೆ.
ಇಂಧೋರ್ ನಗರದ ಹೊರಗ, ಇಂಧೋರ್-ದೇವಾಸ್ ಹೈವೇ ಬಳಿ ನಗರ ಪಾಲಿಕೆಯ ಕಸದ ಗಾಡಿಯಲ್ಲಿ ಕೆಲ ಅನಾಥ ಹಾಗೂ ನಿರ್ಗತಿಕ ವೃದ್ಧರನ್ನು ಕರೆತಂದಿದೆ. ವೃದ್ಧರು ದಯವಿಟ್ಟು ನಮ್ಮನ್ನು ಇಲ್ಲಿ ಬಿಟ್ಟು ಬಿಡಬೇಡಿ, ಚಳಿಯಿಂದ ಸಾಯುತ್ತೇವೆಂದು ಬೇಡಿಕೊಂಡರೂ ಕೇಳದೆ ಕಸವೆಸೆದಂತೆ ಗಾಡಿಯಿಂದ ಹೊರಗೆ ದೂಡಿದ್ದಾರೆ. ಈ ಘಟನೆ ಕಂಡು ಅಲ್ಲಿನ ಸ್ಥಳೀಯರ ಮನ ಕರಗಿದೆ. ವೃದ್ಧರ ಬಳಿ ತೆರಳಿ ಅಧಿಕಾರಿಗಗಳ ಈ ವರ್ತನೆಗೇನು ಕಾರಣ ಎಂದು ಪ್ರಶ್ನಿಸಿದ್ದಾರೆ. ಆದರೆ ವೃದ್ಧರಿಗೆ ಏನು ಹೇಳುವುದೆಂದೇ ತೋಚದಾಗಿದೆ. ಅಧಿಕಾರಿಗಳ ಈ ನಡೆಯಿಂದ ಆಕ್ರೋಶಿತರಾದ ಸ್ಥಳೀಯರು ಇದೆಲ್ಲವನ್ನೂ ತಮ್ಮ ಫೋನ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಫೋಟೊ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ವೃದ್ಧರನ್ನು ಮತ್ತೆ ಗಾಡಿಗೇರಿಸಿ ಕರೆದೊಯ್ದಿದ್ದಾರೆ.