ಪತ್ನಿ ಹಾಗೂ ತಮ್ಮ ಶವ ಪಡೆಯಲು ದೆಹಲಿಗೆ ಆಗಮಿಸಿದ್ದರು: ಗಲ್ಲು ಶಿಕ್ಷೆ ಬಳಿಕ ಶವ ಪಡೆಯಲು ಅಕ್ಷಯ್ ಪತ್ನಿ ಹಾಗೂ ತಮ್ಮ ಆಗಮಿಸಿದ್ದರು. ಬಳಿಕ ಅಕ್ಷಯ್ ಮೃತದೇಹವನ್ನು ಊರಿಗೊಯ್ದು ಅಲ್ಲೇ ಸಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
undefined
ಅಕ್ಷಯ್ ನನ್ನು ಗಲ್ಲಿಗೇರಿಸಲಾಗಿದೆ ಎಂಬ ಸುದ್ದಿ ಬಂದೆರಗಿದ ಬಳಿಕ ಆತ ಹುಟ್ಟಿ ಬೆಳೆದಿದ್ದ ಹಳ್ಳಿಯ ಹಲವಾರು ಮನೆಗಳಲ್ಲಿ ಆಹಾರವನ್ನು ತಯಾರಿಸಿಲ್ಲ.
undefined
ಯಾರು ಈ ಅಕ್ಷಯ್ ಠಾಕೂರ್? ಅಕ್ಷಯ್ ಬಿಹಾರ್ ನಿವಾಸಿ. ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ್ದ ಅಕ್ಷಯ್ ಅಲ್ಲಿಂದ ದೆಲಿಗೆ ತೆರಳಿದ್ದ. ಮದುವೆ ಬಳಿಕವೇ ಅಂದರೆ 2011 ರಲ್ಲಿ ಈತ ರಾಷ್ಟ್ರರಾಜಧಾನಿಗೆ ತೆರಳಿದ್ದ. ಅಲ್ಲಿ ಈತ ರಾಮ್ ಸಿಂಗ್ ನನ್ನು ಭೇಟಿಯಾಗುತ್ತಾನೆ. ಈತನಿಗೆ ಪತ್ನಿ ಹಾಗೂ ಓರ್ವ ಮಗನಿದ್ದ.
undefined
ಗಲ್ಲಿಗೇರಿಸುವುದಕ್ಕೂ ಮುನ್ನ ನಾಲ್ವರಿಗೂ ಪರಸ್ಪರ ಭೇಟಿಯಾಗುವ ಅವಕಾಶ ನೀಡಲಿಲ್ಲ: ನಾಲ್ವರೂ ದೋಷಿಗಳು ಗಲ್ಲಿಗೇರುವುದಕ್ಕೂ ಮುನ್ನ ಪರಸ್ಪರ ಭೇಟಿಯಾಗಲು ಇಚ್ಛಿಸಿದ್ದರು. ಆದರೆ ತಿಹಾರ್ ಜೈಲು ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ.
undefined
ಗಲ್ಲಿಗೇರಿಸುವುದಕ್ಕೂ ಮುನ್ನ ಅಕ್ಷಯ್ ಅಂತಿಮ ಇಚ್ಛೆ: ಗಲ್ಲಿಗೇರಿಸುವುದಕ್ಕೂ ಮುನ್ನ ಪವನ್ ಹಾಗೂ ಅಕ್ಷಯ್ ಕೊನೆ ಆಸೆಯನ್ನು ಹೇಳಿಕೊಂಡಿರಲಿಲ್ಲ. ಇಬ್ಬರೂ ಮೌನ ವಹಿಸಿದ್ದರು.
undefined
ನಿರ್ಭಯಾ ದೋಷಿ ಮುಕೇಶ್ ಅಂಗಾಂಗ ದಾನ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದು, ಇದನ್ನಾತ ಲಿಖಿತ ರೂಪದಲ್ಲೂ ತಿಳಿಸಿದ್ದ.
undefined
ದೋಷಿ ವಿನಯ್ ಜೈಲಿನಲ್ಲಿ ಪೇಂಟಿಂಗ್ ಮಾಡಿದ್ದು, ಇದನ್ನಾತ ಜೈಲು ಅಧಿಕಾರಿಗಳಿಗೆ ನೀಡಿದ್ದಾನೆ. ವಿನಯ್ ತನ್ನ ಕೊನೆ ಇಚ್ಛೆಯನ್ನು ತಿಳಿಸಿದ್ದು, ತನ್ನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವಾಗ ಅದರೊಂದಿಗೆ ಹನುಮಾನ್ ಚಾಲಿಸಾ ಹಾಗೂ ಒಂದು ಫೋಟೋ ಇಟ್ಟು ಕೊಡುವಂತೆ ಹೇಳಿದ್ದ.
undefined
ಇನ್ನು ದೋಷಿಗಳನ್ನು ನೇಣಿಗೇರಿಸಿದ ಬಳಿಕ ತಿಹಾರ್ ಜೈಲು ಆವರಣದಲ್ಲಿ ಸಾರ್ವಜನಿಕರ ಸಂಭ್ರಮ ಮುಗಿಲು ಮುಟ್ಟಿತ್ತು. ಗಲ್ಲಿಗೇರಿಸುವ ದಿನದಂದೇ ತಿಹಾರ್ ಜೈಲು ಆವರಣದಲ್ಲಿ ನೆರೆದಿದ್ದ ಜನರು ನ್ಯಾಯಾಂಗಕ್ಕೆ ಧನ್ಯವಾದ ತಿಳಿಸಿದ್ದರು.
undefined