ಸಾರ್ವಜನಿಕ ಆಸ್ತಿ ಪಾಸ್ತಿ ನಾಶ, ಮಾಸ್ಕ್ ತಿರಸ್ಕಾರ; ಪ್ರತಿಭಟನಾ ರೈತರ ಮೇಲೆ 39 ಕೇಸ್!

First Published Feb 2, 2021, 9:04 PM IST

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಟ್ರಾಕ್ಟರ್ ರ್ಯಾಲಿ ಮೂಲಕ ಹಿಂಸಾ ರೂಪ ಪಡೆದಿತ್ತು. ಸುಮಾರು 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇದೀಗ ದೆಹಲಿ ಪೊಲೀಸ್ ಪ್ರತಿಭಟನಾ ನಿರತ ರೈತರ ಮೇಲೆ 39 ಕೇಸ್ ದಾಖಲಿಸಿದೆ. ಈ ಕುರಿತ ವಿವರ ಇಲ್ಲಿದೆ.
 

ಕೃಷಿ ಕಾಯ್ದೆ ವಿರೋಧಿಸಿ ಜನವರಿ 26ರಂದು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಹಿಂಸಾ ರೂಪ ಪಡೆದಿತ್ತು. ರೈತರ ಪ್ರತಿಭಟನೆಯ ಲಾಭವನ್ನು ಕೆಲ ಉಗ್ರಗಾಮಿ ಸಂಘಟನೆಗಳು ಪಡೆದುಕೊಂಡಿದೆ ಅನ್ನೋ ಆರೋಪಗಳೂ ಇವೆ.
undefined
ಪೊಲೀಸರ ಮೇಲೆ ದಾಳಿ, ಪೊಲೀಸ್ ವಾಹನ, ಬಸ್ ಸೇರಿದಂತೆ ಹಲವು ವಾಹನ ಜಖಂ ಗೊಳಿಸಿದ ಹಾಗೂ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಟ್ರಾಕ್ಟರ್ ರ್ಯಾಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿತ್ತು.
undefined
ಟ್ರಾಕ್ಟರ್ ರ್ಯಾಲಿ ಆಯೋಜಿಸಿದ ಪ್ರತಿಭಟನಾ ನಿರತ ರೈತ ಸಂಘಟನೆಗಳ ಮೇಲೆ 39 ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
undefined
ನಿಯಮ ಉಲ್ಲಂಘಿಸಿದ ರೈತ ಸಂಘಟನೆಗಳ ಮೇಲೆ 39 ಕೇಸ್ ದಾಖಲಿಸಲಾಗಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
undefined
ಪ್ರತಿಭಟನೆ ವೇಳೆ ರೈತರು ಮಾಸ್ಕ್ ಧರಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ರೈತರು ಇತರರ ಆರೋಗ್ಯವನ್ನು ಇಕ್ಕಟ್ಟಿಗೆ ಸಿಲಕಿಸಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ.
undefined
39 ಪ್ರಕರಣಗಳಲ್ಲಿ ಒಂದು ಆತ್ಮಹತ್ಯೆ ಪ್ರಯತ್ನ ಕೇಸ್ ಕೂಡ ದಾಖಲಾಗಿದೆ. ರೈತರ ಪ್ರತಿಭಟನಾ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಲಾಗಿದೆ. ಕಾನೂನು ಪ್ರಕಾರ ಆತ್ಮಹತ್ಯೆ ಕೂಡ ಅಪರಾಧವಾಗಿದೆ.
undefined
click me!