ಪ್ರಧಾನಿ ಮೋದಿಗೆ ಧ್ವಜಾರೋಹಣಕ್ಕೆ ನೆರವು ನೀಡಿದ ಶ್ವೇತಾ ಪಾಂಡೆ ಯಾರು?

Published : Aug 15, 2020, 07:52 PM ISTUpdated : Aug 15, 2020, 07:53 PM IST

ನವದೆಹಲಿ(ಆ. 15)ಸ್ವಾತಂತ್ರ್ಯದಿನದಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಸಂದೇಶ ತಿಳಿಸಿದ್ದಾರೆ.   ಈ ವರ್ಷ ಪ್ರಧಾನಿಗೆ ಧ್ವಜಾರೋಹಣ ಮಾಡಲು ನೆರವಾಗಿದ್ದು ಮೇಜರ್ ಶ್ವೇತಾ ಪಾಂಡೆ.

PREV
16
ಪ್ರಧಾನಿ ಮೋದಿಗೆ ಧ್ವಜಾರೋಹಣಕ್ಕೆ ನೆರವು ನೀಡಿದ ಶ್ವೇತಾ ಪಾಂಡೆ ಯಾರು?

ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಘಟಕದ ಅಧಿಕಾರಿ ಶ್ವೇತಾ ಪಾಂಡೆ. ಕೆಲ ದಿನಗಳ ಹಿಂದೆ ಭಾರತದ ರಕ್ಷಣಾ ಇಲಾಖೆ ಪ್ರಧಾನಿಗೆ ಗೌರವ ವಂದನೆ ನೀಡಿ ಧ್ವಜಾರೋಹಣಕ್ಕೆ ನೆರವು ನೀಡುವವರ ಹೆಸರು ಘೋಷಣೆ ಮಾಡಿತ್ತು.

ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಘಟಕದ ಅಧಿಕಾರಿ ಶ್ವೇತಾ ಪಾಂಡೆ. ಕೆಲ ದಿನಗಳ ಹಿಂದೆ ಭಾರತದ ರಕ್ಷಣಾ ಇಲಾಖೆ ಪ್ರಧಾನಿಗೆ ಗೌರವ ವಂದನೆ ನೀಡಿ ಧ್ವಜಾರೋಹಣಕ್ಕೆ ನೆರವು ನೀಡುವವರ ಹೆಸರು ಘೋಷಣೆ ಮಾಡಿತ್ತು.

26

ಶ್ವೇತಾ ಉತ್ತರ ಪ್ರದೇಶದ ಲಕ್ನೋದವರು. ರಷ್ಯಾದ ಮಾಸ್ಕೋದಲ್ಲಿ ನಡೆದ ಭಾರತೀಯ ಸೇನೆಯ ಪರೇಡ್ ನಲ್ಲಿ ಭಾಗವಹಿಸಿದ್ದರು.

ಶ್ವೇತಾ ಉತ್ತರ ಪ್ರದೇಶದ ಲಕ್ನೋದವರು. ರಷ್ಯಾದ ಮಾಸ್ಕೋದಲ್ಲಿ ನಡೆದ ಭಾರತೀಯ ಸೇನೆಯ ಪರೇಡ್ ನಲ್ಲಿ ಭಾಗವಹಿಸಿದ್ದರು.

36

ಈ ರೀತಿ ಪ್ರಧಾನಿಗೆ ನೆರವು ನೀಡಿದ ಮೊಟ್ಟ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಶ್ವೇತಾ ಪಾತ್ರವಾಗಿದ್ದಾರೆ.

ಈ ರೀತಿ ಪ್ರಧಾನಿಗೆ ನೆರವು ನೀಡಿದ ಮೊಟ್ಟ ಮೊದಲ ಮಹಿಳೆ ಎಂಬ ಶ್ರೇಯಕ್ಕೂ ಶ್ವೇತಾ ಪಾತ್ರವಾಗಿದ್ದಾರೆ.

46

ಭಾಷಣ,  ಚರ್ಚಾ ಸ್ಪರ್ಧೆಯಲ್ಲೂ ಶ್ವೇತಾ ಗಳಿಸಿದ ಪದಕಗಳಿಗೆ ಲೆಕ್ಕವಿಲ್ಲ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿರುವ ಶ್ವೇತಾ 2012  ರಿಂದ ಸೇವೆಯಲ್ಲಿ ಇದ್ದಾರೆ.

ಭಾಷಣ,  ಚರ್ಚಾ ಸ್ಪರ್ಧೆಯಲ್ಲೂ ಶ್ವೇತಾ ಗಳಿಸಿದ ಪದಕಗಳಿಗೆ ಲೆಕ್ಕವಿಲ್ಲ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿರುವ ಶ್ವೇತಾ 2012  ರಿಂದ ಸೇವೆಯಲ್ಲಿ ಇದ್ದಾರೆ.

56

ಚೆನ್ನೈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘರ್ವಾಲ್ ರೈಫಲ್ಸ್ ವಿಭಾಗದಲ್ಲಿಯೂ ಪದಕ ಸಂಪಾದನೆ ಮಾಡಿದ್ದರು.

ಚೆನ್ನೈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘರ್ವಾಲ್ ರೈಫಲ್ಸ್ ವಿಭಾಗದಲ್ಲಿಯೂ ಪದಕ ಸಂಪಾದನೆ ಮಾಡಿದ್ದರು.

66

ಶ್ವೇತಾ ತಾಯಿ ಅಮಿತಾ ಪಾಂಡೆ ಸಂಸ್ಕೃತ ಅಧ್ಯಾಪಕಿಯಾಗಿದ್ದರೆ ತಂದೆ ರಾಜ್ ರತನ್ ಪಾಂಡೆ ಉತ್ತರ ಪ್ರದೇಶ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರು.

ಶ್ವೇತಾ ತಾಯಿ ಅಮಿತಾ ಪಾಂಡೆ ಸಂಸ್ಕೃತ ಅಧ್ಯಾಪಕಿಯಾಗಿದ್ದರೆ ತಂದೆ ರಾಜ್ ರತನ್ ಪಾಂಡೆ ಉತ್ತರ ಪ್ರದೇಶ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories