1991ರಲ್ಲಿ 'ಮಾಂತ್ರಿಕ ಬಜೆಟ್' ಮಂಡಿಸಿ ದೇಶವನ್ನು ದಿವಾಳಿಯಿಂದ ಮೇಲೆತ್ತಿದ್ದ ಮನಮೋಹನ ಸಿಂಗ್

Published : Dec 27, 2024, 11:31 AM ISTUpdated : Dec 27, 2024, 11:33 AM IST

ಹೆಚ್ಚುಕಮ್ಮಿ ದಿವಾಳಿಯತ್ತ ಸಾಗಿದ್ದ ದೇಶದ ಆರ್ಥಿಕತೆಯನ್ನು ಆ ಬಜೆಟ್‌ನಲ್ಲಿ ಮನಮೋಹನ ಸಿಂಗ್ ಅಚ್ಚರಿಯ ರೀತಿಯಲ್ಲಿ ಮೇಲೆತ್ತಲು ಅಡಿಪಾಯ ಹಾಕಿದ್ದರು. 1985ರಿಂದ ದೇಶದ ಆರ್ಥಿಕತೆ ಅಧಃಪತನದತ್ತ ಸಾಗುತ್ತಿತ್ತು. 

PREV
16
1991ರಲ್ಲಿ 'ಮಾಂತ್ರಿಕ ಬಜೆಟ್' ಮಂಡಿಸಿ ದೇಶವನ್ನು ದಿವಾಳಿಯಿಂದ ಮೇಲೆತ್ತಿದ್ದ ಮನಮೋಹನ ಸಿಂಗ್

ಭಾರತದ ಆರ್ಥಿಕತೆಯನ್ನು ಉದಾರೀಕರಣಕ್ಕೆ ತೆರೆದುಕೊಳ್ಳುವಂತೆ ಮಾಡಿ ಅದ್ಭುತ ವೇಗದಲ್ಲಿ ಬೆಳೆಯುವ ಆರ್ಥಿಕತೆಯನ್ನಾಗಿ ಪರಿವರ್ತಿಸಿದ ಚಾಣಾಕ್ಷ ಎಂಬ ಹೆಗ್ಗಳಿಕೆ ಮನಮೋಹನ ಸಿಂಗ್ ಅವರದು. ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಸಂಪುಟದಲ್ಲಿ ವಿತ್ತ ಮಂತ್ರಿಯಾಗಿದ್ದ ಸಿಂಗ್ 1991ರಲ್ಲಿ ಮಂಡಿಸಿದ ಬಜೆಟ್ ಈ ದೇಶದ ಗತಿಯನ್ನೇ ಬದಲಿಸಿದ ಮಾಂತ್ರಿಕ ಬಜೆಟ್ ಎಂಬ ಖ್ಯಾತಿ ಪಡೆದಿದೆ. 

26

ಹೆಚ್ಚುಕಮ್ಮಿ ದಿವಾಳಿಯತ್ತ ಸಾಗಿದ್ದ ದೇಶದ ಆರ್ಥಿಕತೆಯನ್ನು ಆ ಬಜೆಟ್‌ನಲ್ಲಿ ಮನಮೋಹನ ಸಿಂಗ್ ಅಚ್ಚರಿಯ ರೀತಿಯಲ್ಲಿ ಮೇಲೆತ್ತಲು ಅಡಿಪಾಯ ಹಾಕಿದ್ದರು. 1985ರಿಂದ ದೇಶದ ಆರ್ಥಿಕತೆ ಅಧಃಪತನದತ್ತ ಸಾಗುತ್ತಿತ್ತು. ಜಿಡಿಪಿ ಕೇವಲ ಶೇ.3.5ರಷ್ಟು ವೇಗದಲ್ಲಿ ಬೆಳೆಯುತ್ತಿತ್ತು. ಪಾಕಿಸ್ತಾನವೇ ಭಾರತಕ್ಕಿಂತ ಹೆಚ್ಚು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿತ್ತು. ಹೂಡಿಕೆಗಳು ಬಿದ್ದುಹೋಗಿದ್ದವು. 

36

ಲೈಸೆನ್ಸ್‌ ರಾಜ್‌ನಿಂದ ದೇಶದ ಆರ್ಥಿಕತೆ ಕಂಗೆಟ್ಟಿತ್ತು. ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅದೆಲ್ಲದರ ಪರಿಣಾಮ ವಿದೇಶಗಳಿಗೆ ಪಾವತಿಸಬೇಕಾದ ಸಾಲ ಬೆಟ್ಟದಷ್ಟಾಗಿತ್ತು. ದೇಶ ಗಂಭೀರ ಆರ್ಥಿಕ ಕುಸಿತಕ್ಕೆ ಸಿಲುಕಿತ್ತು. ವಿದೇಶಿ ವಿನಿಮಯ ಮೀಸಲು ಕೇವಲ 3 ವಾರಗಳ ಆಮದಿಗೆ ಸಾಕಾಗುವಷ್ಟು ಉಳಿದಿತ್ತು. ಭಾರತ ಸರ್ಕಾರವು ಸ್ವಿಜರ್‌ಲೆಂಡ್‌ನ ಯೂನಿಯನ್ ಬ್ಯಾಂಕ್‌ನಲ್ಲಿ 20 ಟನ್ ಚಿನ್ನ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ 47 ಟನ್ ಚಿನ್ನ ಅಡ ಇಟ್ಟಿತ್ತು. 
 

46

ಈ ದುಸ್ಥಿತಿಯನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡ ಮನಮೋಹನ ಸಿಂಗ್, ದೇಶದ ಆರ್ಥಿಕತೆಯನ್ನು ಉದಾರೀಕರಣಗೊಳಿಸಲು ಬಜೆಟ್‌ನಲ್ಲಿ ನಿರ್ಧರಿಸಿದರು. ನಂತರ ದೇಶದ ಆರ್ಥಿಕ ಬೆಳವಣಿಗೆಯ ಗತಿಯೇ ಬದಲಾಯಿತು. ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ತಮಗೆ ಹಣಕಾಸು ವಿಚಾರಗಳು ಅಷ್ಟೇನೂ ಅರ್ಥವಾಗುವುದಿಲ್ಲ ಎಂದು ಎಲ್ಲಾ ಹೊಣೆಯನ್ನು ಮನಮೋಹನ ಸಿಂಗ್ ಮೇಲೆ ಹಾಕಿದ್ದರು. 

56

ಸಿಂಗ್ ಅವರು ಪ್ರಣಬ್ ಮುಖರ್ಜಿ ಜೊತೆ ಚರ್ಚಿಸಿ, ಅದಕ್ಕೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ಗಳಿಸಿದ್ದ ಅನುಭವ ಮತ್ತು ಆರ್ಥಿಕ ವಿಷಯಗಳಲ್ಲಿ ತಮಗಿದ್ದ ಅಪಾರ ಪಾಂಡಿತ್ಯವನ್ನು ಬಳಸಿ ಬಜೆಟ್ ರೂಪಿಸಿದರು. ಅದರಲ್ಲಿ ಲೈಸನ್ಸ್ ರಾಜ್ ತೆಗೆದು ಹಾಕಿದರು. ಬಡ್ಡಿದರಗಳನ್ನು ಇಳಿಸಿ, ದೇಶದ ವಿವಿಧ ಕ್ಷೇತ್ರಗಳನ್ನು ಖಾಸಗಿ ಕಂಪನಿಗಳಿಗೆ ತೆರೆದರು. ಬಹಳಷ್ಟು ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅನುಮತಿ ನೀಡಿದರು.

66

ಅದರಿಂದಾಗಿ ದೇಶದ ಆರ್ಥಿಕತೆ ಮುಕ್ತ ಮಾರುಕಟ್ಟೆಯಾಯಿತು. ಈ ಸುಧಾರಣೆಗಳನ್ನು ಗಮನಿಸಿ ವಿಶ್ವಬ್ಯಾಂಕ್ ಭಾರತಕ್ಕೆ ದೊಡ್ಡ ಸಾಲ ನೀಡಿತು. ಅದನ್ನು ಗಮನಿಸಿ ಬೇರೆ ಬೇರೆ ದೇಶಗಳು ಹಾಗೂ ಬ್ಯಾಂಕುಗಳೂ ಸಾಲ ನೀಡಿದವು. ಆಗ ದಿವಾಳಿಯಾಗುವುದರಿಂದ ದೇಶ ಬಚಾವಾಯಿತು. ಮುಂದೆ ಭಾರತದ ಆರ್ಥಿಕತೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಗಳಲ್ಲಿ ಒಂದಾಗಿ ಬದಲಾಯಿತು.

click me!

Recommended Stories