ಕುಣಿಕೆಯನ್ನು ಕಂಡು ಕಂಬನಿ ಮಿಡಿದಿದ್ದ ಕಸಬ್‌, ತನ್ನ ಜೀವನದ ಕೊನೆಯ ರಾತ್ರಿ ಹೀಗೆ ಕಳೆದಿದ್ದ ಉಗ್ರ!

First Published Jul 13, 2022, 12:05 PM IST

ಪಾಕಿಸ್ತಾನದಿಂದ ಭಾರತಕ್ಕೆ ಬಂದ ಭಯೋತ್ಪಾದಕ ಅಮೀರ್ ಅಜ್ಮಲ್ ಕಸಬ್ ನವೆಂಬರ್ 26, 2008 ರಂದು ಮುಂಬೈ ಮೇಲೆ ದಾಳಿ ನಡೆಸಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರು. ಮುಂಬೈನ ವಿವಿಧ ಪ್ರದೇಶಗಳಲ್ಲಿ ನಡೆದ ಈ ಭಯೋತ್ಪಾದಕ ದಾಳಿಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಬೈ ದಾಳಿಗೆ ಬಂದಿದ್ದ 10 ಉಗ್ರರ ಪೈಕಿ ಕಸಬ್ ಮಾತ್ರ ಜೀವಂತವಾಗಿ ಸಿಕ್ಕಿಬಿದ್ದಿದ್ದು, 2012ರಲ್ಲಿ ಗಲ್ಲಿಗೇರಿಸಲಾಗಿತ್ತು. 1987ರ ಜುಲೈ 13ರಂದು ಪಾಕಿಸ್ತಾನದ ಫರೀದ್‌ಕೋಟ್‌ನಲ್ಲಿ ಜನಿಸಿದ ಕಸಬ್‌ಗೆ ನೇಣುಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದಾಗ ಹೌಹಾರಿದ್ದ. ಹಾಗಾದ್ರೆ ಗಲ್ಲಿಗೇರುವ ಮುನ್ನ ಭಯೋತ್ಪಾದಕ ಕಸಬ್‌ ಕೊನೆಯ ರಾತ್ರಿ ಹೇಗೆ ಕಳೆದಿದ್ದ ಗೊತ್ತಾ?

ಭಯೋತ್ಪಾದಕ ಕಸಬ್‌ನನ್ನು ಗಲ್ಲಿಗೇರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಅತ್ಯಂತ ರಹಸ್ಯವಾಗಿಡಲಾಗಿತ್ತು ಎಂಬುವುದು ಉಲ್ಲೇಖನೀಯ. ಗಲ್ಲಿಗೇರಿಸುವ ಮೊದಲು, ಕಸಬ್‌ನನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಎಗ್ ಸೆಲ್‌ನಿಂದ ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮುಂಬೈ ಪೊಲೀಸರ 17 ಅಧಿಕಾರಿಗಳಿಗೆ ಕಸಬ್‌ನನ್ನು ಪುಣೆಯ ಯರವಾಡ ಜೈಲಿಗೆ ಸಾಗಿಸುವ ಜವಾಬ್ದಾರಿಯನ್ನು ವಹಿಸಲಾಯಿತು. ಕಸಬ್‌ನನ್ನು ಬುರ್ಖಾದಲ್ಲಿ ಯರವಾಡ ಜೈಲಿಗೆ ಕರೆತರಲಾಯಿತು.

ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಕಸಬ್ ನನ್ನು ಸಾಗಿಸಲು 3 ಗಂಟೆ ಬೇಕಾಯಿತು. ಈ ಸ್ಥಳಾಂತರದ ಸಮಯದಲ್ಲಿ, ಕಸಬ್ ತುಂಬಾ ಭಯಭೀತನಾಗಿದ್ದನು, ಅವನ ಬಾಯಿಂದ ಒಂದು ಪದವೂ ಹೊರಡಲಿಲ್ಲ. (ಫೋಟೋ: 26/11 ಅಟ್ಯಾಕ್ ಚಿತ್ರದಲ್ಲಿ ಕಸಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ)
 

ಪುಣೆ ಜೈಲಿಗೆ ಸ್ಥಳಾಂತರಗೊಂಡ ನಂತರ, ಮರಣದಂಡನೆಗೆ ಒಂದು ದಿನ ಮೊದಲು, ಕಸಬ್ ಬಳಿ ಕೊನೆಯ ಆಸೆಯನ್ನು ಕೇಳಿದಾಗ, ಆತ ಏನನ್ನೂ ಹೇಳಲಿಲ್ಲ. ಗಲ್ಲು ಶಿಕ್ಷೆ ಹೆಸರು ಕೇಳಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
 

ಕಸಬ್ ಗಲ್ಲಿಗೇರಿದ ದಿನ ಬೆಳಗ್ಗೆ ಸ್ನಾನ ಮಾಡಲಾಗಿತ್ತು. ನೇಣಿಗೆ ಶರಣಾಗುವ ಹಿಂದಿನ ರಾತ್ರಿ ಕಸಬ್‌ಗೆ ನಿದ್ದೆಯೇ ಬಂದಿರಲಿಲ್ಲ. ಕಣ್ಮಿಚ್ಚಿ ತೆರೆಯುವಷ್ಟರಲ್ಲಿ ರಾತ್ರಿ ಕಳೆದು ಹೋಗಿತ್ತು. ಆತ ನವೆಂಬರ್ 21 ರಂದು ಬೆಳಿಗ್ಗೆ ನಮಾಜ್ ಮಾಡಿದ್ದ.

ಮರಣದಂಡನೆಗೆ ಮುನ್ನ ಕಸಬ್‌ಗೆ ಮರಣದಂಡನೆ ಶಿಕ್ಷೆಯ ಬಗ್ಗೆ ಹೇಳಿದಾಗ, ಅವನ ಆತ್ಮವು ನಡುಗಿತು. ಕುಣಿಕೆಯ ಹೆಸರು ಕೇಳಿ ಗಾಬರಿಯಾದರು. ಆದರೆ, ಈ ಸುದ್ದಿಯನ್ನು ತನ್ನ ತಾಯಿಗೆ ತಿಳಿಸಬೇಕು ಎಂದಿದ್ದರು.

ಗಲ್ಲು ಶಿಕ್ಷೆಗೆ ಮುನ್ನ ಭಯೋತ್ಪಾದಕ ಕಸಬ್ ಜೈಲರ್ ಸಮ್ಮುಖದಲ್ಲಿ ತನ್ನ ಅಪರಾಧಗಳಿಗಾಗಿ ಅಲ್ಲಾಹನಲ್ಲಿ ಕ್ಷಮೆಯಾಚಿಸಿದ್ದ. ಅಷ್ಟೇ ಅಲ್ಲ ಮುಂದೆಂದೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದ.

ಭಯೋತ್ಪಾದಕ ಕಸಬ್‌ನನ್ನು ಪುಣೆಯ ಯರವಾಡ ಜೈಲಿನಲ್ಲಿ ಬೆಳಗ್ಗೆ 7.30ಕ್ಕೆ ಗಲ್ಲಿಗೇರಿಸಲಾಯಿತು. ಕೆಲಕಾಲ ನೇಣು ಬಿಗಿದುಕೊಂಡ ಬಳಿಕ ಮೃತದೇಹದ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ವೈದ್ಯರು ಕಸಬ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಕಸಬ್ ನನ್ನು 15 ಪೊಲೀಸರ ತಂಡ ಕಾರ್ಯಾಚರಣೆ ಮೂಲಕ ಜೀವಂತವಾಗಿ ಹಿಡಿದಿದ್ದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಮುಂಬೈ ಪೊಲೀಸ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ತುಕಾರಾಂ ಓಂಬ್ಳೆ ವೀರಗತಿಯನ್ನು ಸ್ವೀಕರಿಸಿದ್ದರು. ಎದೆಗೆ ಗುಂಡು ತಗುಲಿದರೂ ಕಸಬ್ ನನ್ನು ಬಿಟ್ಟಿರಲಿಲ್ಲ.

ನವೆಂಬರ್ 26, 2008 ರಂದು, ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕರು ಮುಂಬೈನ ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಮೇಡಮ್ ಕಾಮಾ ಆಸ್ಪತ್ರೆ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ನಿಲ್ದಾಣದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ 160 ಮಂದಿ ಸಾವನ್ನಪ್ಪಿದ್ದರು. ಆದರೆ, ಉಗ್ರ ಕಸಬ್ ಜೀವಂತವಾಗಿ ಸಿಕ್ಕಿಬಿದ್ದಿದ್ದಾನೆ.
 

click me!