ಮನೆ ಬಾಗಿಲಿಗೆ ಪ್ರಧಾನಿ ಹುದ್ದೆ ಬಂದಿದ್ದರೂ, ತಾವು ಆ ಪಟ್ಟಕ್ಕೇರುವುದಿಲ್ಲ. ಏಕೆಂದರೆ, ತಮ್ಮ ಅಂತರಾತ್ಮ ಒಪ್ಪುತ್ತಿಲ್ಲ ಎಂಬ ಆಘಾತವನ್ನು ಕಾಂಗ್ರೆಸ್ಸಿಗರಿಗೆ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಅತ್ತು ಕರೆದರೂ ಸೋನಿಯಾ ಮನ ಕರಗಲಿಲ್ಲ. ಸೋನಿಯಾ ತ್ಯಾಗ ಮಾಡಿದ ಹುದ್ದೆಗೆ ಯಾರು ಎಂಬುದೇ ತಿಳಿಯದಾಯಿತು. ಕಾಂಗ್ರೆಸ್ಸಿನ ಹಿರಿಯ ನಾಯಕರನೇಕರು ತಮಗೆ ಆ ಅದೃಷ್ಟ ಒಲಿಯಬಹುದು ಎಂಬ ಎಣಿಕೆಯಲ್ಲಿದ್ದರು.