ರೈತ ಹೋರಾಟ ಹೆಸರಿನಲ್ಲಿ ದಂಗೆ; ದೆಹಲಿಯಲ್ಲಿ ಇಂಟರ್ನೆಟ್ ಸೇರಿದಂತೆ ಕೆಲ ಸೇವೆ ಸ್ಥಗಿತ!

First Published Jan 26, 2021, 6:28 PM IST

ರೈತ ಪ್ರತಿಭಟನೆ ಹೋರಾಟ ದಂಗೆಯಾಗಿ ಮಾರ್ಪಟ್ಟಿದೆ. ನಿಗದಿತ ಮಾರ್ಗಗಳಲ್ಲಿ ಟ್ರಾಕ್ಟರ್ ರ‍್ಯಾಲಿ ಆಯೋಜಿಸಲು ನಿರಾಕರಿಸಿದ ರೈತರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ತ್ರಿವರ್ಣ ಧ್ವಜ ಹಾರಬೇಕಿದ್ದ ಕೆಂಪು ಕೋಟೆ ವಶಪಡಿಸಿ ಸಿಖ್ ಧ್ವಜ ಹಾರಿಸಿದ್ದಾರೆ. ವಾಹನಗಳನ್ನು ಜಖಂಗೊಳಿಸಿದ್ದಾರೆ. ದಂಗೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗತಿಗೊಳಿಸಲಾಗಿದೆ. 

ಟ್ರಾಕ್ಟರ್ ರ‍್ಯಾಲಿ ದಂಗೆಯಾಗಿ ಮಾರ್ಪಟ್ಟಿದೆ. ಹೀಗಾಗಿ ದೆಹಲಿ ಕೆಲ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ದಂಗೆ ನಿಯಂತ್ರಣಕ್ಕೆ ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ.
undefined
ಸಿಂಘು ಬಾರ್ಡರ್ ಸೇರಿದಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳ ಹಾಗೂ ರೈತರ ಟ್ರಾಕ್ಟರ್ ರ‍್ಯಾಲಿ ಹಾಗೂ ದಂಗೆ ಎಬ್ಬಿಸಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತೊಳಿಸಲಾಗಿದೆ.
undefined
ವ್ಯಾಟ್ಸಾಪ್, ಸೇರಿದಂತೆ ಹಲವು ಮಾಧ್ಯಮದ ಮೂಲಕ ವಿಡಿಯೋ, ಚಿತ್ರಗಳು ಸೇರಿದಂತೆ ಪ್ರಚೋದಕಾರಿ ಅಂಶಗಳು ಹರಿದಾಡುತ್ತಿದೆ. ಇದು ದಂಗೆ ಮತ್ತಷ್ಟು ಹೆಚ್ಚಾಗಲು ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ
undefined
ಇಂದು ಮಧ್ಯರಾತ್ರಿ12 ಗಂಟೆ ವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗವುದು ಎಂದು ಪೊಲೀಸ್ ಮೂಲಗಳು ಹೇಳಿವೆ
undefined
ದೇಶದಲ್ಲಿ ರೈತರು ಹಲವು ಹೋರಾಟಗಳನ್ನು ನಡೆಸಿ ತಮ್ಮ ಹಕ್ಕುಗಳನ್ನು ಪಡೆದುಕೊಂಡ ಉದಾಹರಣೆ ಇದೆ. ಆದರೆ ದಂಗೆಗಾಗಿರ ಹೋರಾಟ ನಡೆಸಿದ ಕುಖ್ಯಾತಿ ಇದೀಗ ರೈತ ಸಂಘಟನೆಗಳ ಮೇಲೆ ಬಿದ್ದಿದೆ
undefined
ಟ್ರಾಕ್ಟರ್ ರ‍್ಯಾಲಿ ಆಯೋಜಿಸಿಯೇ ತೀರುತ್ತೇವೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ ರೈತರಿಗೆ ನಿಗದಿತ ಮಾರ್ಗಸೂಚಿಯನ್ನು ದೆಹಲಿ ಪೊಲೀಸರು ನೀಡಿದ್ದರು. ಆದರೆ ಇದೆಲ್ಲವನ್ನೂ ಧಿಕ್ಕರಿಸಿದ ರೈತ ಸಂಘಟನೆಗಳು ಹಿಂಸಾರೂಪಕ ಪ್ರತಿಭಟನೆ ನಡೆಸಿದ್ದಾರೆ.
undefined
ಗಣರಾಜ್ಯೋತ್ಸವದ ಹೆಮ್ಮೆ ಮಣ್ಣುಪಾಲಾಗುವಂತೆ ಮಾಡಿದ್ದಾರೆ. ತ್ರಿವರ್ಣ ಧ್ವಜ ಹಾರಾಡುವ ಸ್ಥಾನದಲ್ಲಿ ಸಿಖ್ ಧ್ವಜ ಹಾರಿಸಿದ್ದಾರೆ. ಐತಿಹಾಸಿಕ ಕೆಂಪು ಕೋಟೆಯನ್ನೇ ವಶಪಡಿಸಿಕೊಂಡಿದ್ದಾರೆ.
undefined
ಗಣರಾಜ್ಯೋತ್ಸವ ದಿನದಂತೆ ರೈತರು ದಂಗ ಕೋರರಂತೆ ವರ್ತಿಸಿದ್ದಾರೆ. ಖಲಿಸ್ತಾನ ಸೇರಿದಂತೆ ಕೆಲ ಉಗ್ರ ಸಂಘಟನೆಗಳು ಈ ದಂಗೆಯ ಹಿಂದಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.
undefined
click me!