ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಹವಾಮಾನ ಇಲಾಖೆ ಮೇ.26ಕ್ಕೆ ನೈಖುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಇಲ್ಲಿಂದ ಮಳೆಗಾಲ ಆರಂಭಗೊಳ್ಳಲಿದೆ. ಆದರೆ ಎಲ್ ನಿನೋ ಎಚ್ಚರಿಕೆ ನೀಡಲಾಗಿದೆ.
ಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದೆ. ಮೇ.26ರ ವೇಳೆಗೆ ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದಿದೆ. ಮುಂದಿನ 24 ಗಂಟೆಗಳಲ್ಲಿ, ಮಾನ್ಸೂನ್ ದಕ್ಷಿಣ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳತ್ತ ಮುಂದುವರಿಯಲು ಪೂರಕ ವಾತಾವರಣವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
26
ಎಲ್ ನಿನೋ ಭೀತಿ
ಈ ಬಾರಿ ಮಳೆಗಾಲದಲ್ಲಿ ಹಲವು ಅಡ್ಡಿ ಆತಂಕವನ್ನು ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಮುಖವಾಗಿ ಎಲ್ ನಿನೊ ಭೀತಿ ಆವರಿಸಿದೆ. ಹೀಗಾಗಿ ಮುಂಗಾರು ಪ್ರವೇಶದ ಬಳಿಕ ಉತ್ತಮ ಮಳೆಯಾಗುತ್ತಿದ್ದಂತೆ ಎಲ್ ನಿನೊದಿಂದ ಬರಗಾಲ ಸೇರಿದಂತೆ ಕೆಲೆವಡೆ ಪ್ರವಾಹ ಪರಿಸ್ಥಿತಿಗಳು ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದೆ.
36
ಮಾನ್ಸೂನ್ ಮಧ್ಯೆಯೂ ಬಿಸಿಗಾಳಿಯ ಅಬ್ಬರ
ಮುಂಗಾರು ಬರುತ್ತಿದೆ ಅನ್ನೋ ಖುಷಿ ಒಂದೆಡೆಯಾದರೆ, ವಾಯುವ್ಯ ಮತ್ತು ಮಧ್ಯ ಭಾರತದ ಜನರಿಗೆ ಸದ್ಯಕ್ಕೆ ಬಿಸಿಲಿನಿಂದ ಮುಕ್ತಿ ಇಲ್ಲ. ಈ ವಾರವಿಡೀ ಅಲ್ಲಿ ತೀವ್ರದಿಂದ ಅತೀ ತೀವ್ರ ಬಿಸಿಗಾಳಿ ಮುಂದುವರಿಯಲಿದೆ. ಇದರಿಂದ ಉತ್ತರ ಭಾರತದಲ್ಲಿ ಬಹುತೇಕ ಕಡೆ ಮಳೆಗಾಗಿ ಕಾಯಬೇಕಿದೆ.
ಭಾರತದ ಮುಖ್ಯ ಭೂಭಾಗಕ್ಕೆ ನೈಋತ್ಯ ಮಾನ್ಸೂನ್ ಕಾಲಿಡುವುದನ್ನೇ ಕೇರಳದಲ್ಲಿ ಮುಂಗಾರು ಆರಂಭ ಎಂದು ಕರೆಯುತ್ತಾರೆ. ಇದು ಬೇಸಿಗೆಯ ಸುಡು ಬಿಸಿಲಿನಿಂದ ಮಳೆಗಾಲಕ್ಕೆ ಬದಲಾಗುವ ಪ್ರಮುಖ ಸೂಚಕವಾಗಿದೆ. ಮಾನ್ಸೂನ್ ಉತ್ತರ ದಿಕ್ಕಿನತ್ತ ಸಾಗಿದಂತೆ, ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆಯಿಂದ ಜನರಿಗೆ ರಿಲೀಫ್ ಸಿಗುತ್ತದೆ.IMD ಪ್ರಕಾರ, ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಇದರಲ್ಲಿ ಸುಮಾರು ಏಳು ದಿನಗಳ ವ್ಯತ್ಯಾಸ ಆಗುವುದು ಸಹಜ.
56
IMD ಮುನ್ಸೂಚನಾ ಮಾದರಿ ಮತ್ತು ನಿಖರತೆ
ಕೇರಳಕ್ಕೆ ಮಾನ್ಸೂನ್ ಯಾವಾಗ ಪ್ರವೇಶಿಸಲಿದೆ ಎಂದು IMD 2005ರಿಂದಲೇ ಮುನ್ಸೂಚನೆ ನೀಡುತ್ತಾ ಬಂದಿದೆ. ಇದಕ್ಕಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಒಂದು ಸ್ಟಾಟಿಸ್ಟಿಕಲ್ ಮಾಡೆಲ್ ಬಳಸಲಾಗುತ್ತದೆ. ಇದರಲ್ಲಿ ನಾಲ್ಕು ದಿನಗಳ ವ್ಯತ್ಯಾಸ ಆಗಬಹುದು. ಈ ಮಾಡೆಲ್, ವಾಯುವ್ಯ ಭಾರತದ ಕನಿಷ್ಠ ತಾಪಮಾನ, ದಕ್ಷಿಣ ಭಾರತದ ಮಾನ್ಸೂನ್ ಪೂರ್ವ ಮಳೆ, ದಕ್ಷಿಣ ಚೀನಾ ಸಮುದ್ರದ ಮೇಲಿನ ವಿಕಿರಣ ಸೇರಿದಂತೆ ಒಟ್ಟು ಆರು ಅಂಶಗಳನ್ನು ಆಧರಿಸಿ ಭವಿಷ್ಯ ನುಡಿಯುತ್ತದೆ.
66
ಹವಾಮಾನ ಇಲಾಖೆ ಭವಿಷ್ಯ
2005ರಿಂದ 2025ರವರೆಗಿನ 21 ವರ್ಷಗಳಲ್ಲಿ, 2015ನ್ನು ಬಿಟ್ಟರೆ ಉಳಿದ ಬಹುತೇಕ ವರ್ಷಗಳಲ್ಲಿ IMDಯ ಮುನ್ಸೂಚನೆ ಬಹುತೇಕ ನಿಖರವಾಗಿದೆ. ಕಳೆದ ಆರು ವರ್ಷಗಳಲ್ಲಿ (2020-2025) ಕೂಡ, ಇಲಾಖೆ ಹೇಳಿದ ದಿನಾಂಕದ ಆಸುಪಾಸಿನಲ್ಲೇ ಮಾನ್ಸೂನ್ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ