Published : Jun 16, 2020, 08:10 PM ISTUpdated : Jun 16, 2020, 08:39 PM IST
ಲಡಾಖ್(ಜೂ.16): ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರಿಸಿದೆ. ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೂವರು ಯೋಧರು ಪ್ರಾಣ ಅರ್ಪಿಸಿದ್ದಾರೆ. ತೆಲಂಗಾಣದ ವೀರ ಯೋಧ ಸಂತೋಷ್ ಬಾಬು ಸಹ ಪ್ರಾಣತ್ಯಾಗ ಮಾಡಿದ್ದಾರೆ.
ಚೀನಾದೊಂದಿಗಿನ ಹೋರಾಟದಲ್ಲಿ ಕರ್ನಲ್ ಸಂತೋಷ್ ಬಾಬು ಪ್ರಾಣ ತ್ಯಾಗ ಮಾಡಿದ್ದಾರೆ.
ಚೀನಾದೊಂದಿಗಿನ ಹೋರಾಟದಲ್ಲಿ ಕರ್ನಲ್ ಸಂತೋಷ್ ಬಾಬು ಪ್ರಾಣ ತ್ಯಾಗ ಮಾಡಿದ್ದಾರೆ.
213
16 ಬಿಹಾರ್ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು ಸಂತೋಷ್
16 ಬಿಹಾರ್ ರೆಜಿಮೆಂಟ್ ನ ಕಮಾಂಡಿಂಗ್ ಆಫೀಸರ್ ಆಗಿದ್ದವರು ಸಂತೋಷ್
313
ಮಗನ ಪ್ರಾಣತ್ಯಾಗದ ಬಗ್ಗೆ ತಾಯಿ ಮಾತನಾಡಿದ್ದಾರೆ.
ಮಗನ ಪ್ರಾಣತ್ಯಾಗದ ಬಗ್ಗೆ ತಾಯಿ ಮಾತನಾಡಿದ್ದಾರೆ.
413
ಮಗನ ತ್ಯಾಗದ ಬಗ್ಗೆ ಹೆಮ್ಮೆಇದೆ. ಆದರೆ ಒಬ್ಬನೇ ಮಗನ ಕಳೆದುಕೊಂಡ ನೋವು ಇದೆ ಎನ್ನುವಾಗ ಅವರ ಕಣ್ಣಲ್ಲಿ ದೇಶಭಕ್ತಿಯ ಪ್ರತಿರೂಪ.
ಮಗನ ತ್ಯಾಗದ ಬಗ್ಗೆ ಹೆಮ್ಮೆಇದೆ. ಆದರೆ ಒಬ್ಬನೇ ಮಗನ ಕಳೆದುಕೊಂಡ ನೋವು ಇದೆ ಎನ್ನುವಾಗ ಅವರ ಕಣ್ಣಲ್ಲಿ ದೇಶಭಕ್ತಿಯ ಪ್ರತಿರೂಪ.
513
ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನವರು.
ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನವರು.
613
ಸಂತೊಷ್ ಅವರ ತಂದೆ ಉಪೇಂದರ್ ಮತ್ತು ತಾಯಿ ಮಂಜುಳಾ ದೇಶಸೇವೆಯಲ್ಲಿ ನಿರತರಾಗಿದ್ದವರು. ಸಂತೋಷ್ ಪತ್ನಿ ಸಂತೋಷಿನಿ ದೆಹಲಿ ಮೂಲದವರು.
ಸಂತೊಷ್ ಅವರ ತಂದೆ ಉಪೇಂದರ್ ಮತ್ತು ತಾಯಿ ಮಂಜುಳಾ ದೇಶಸೇವೆಯಲ್ಲಿ ನಿರತರಾಗಿದ್ದವರು. ಸಂತೋಷ್ ಪತ್ನಿ ಸಂತೋಷಿನಿ ದೆಹಲಿ ಮೂಲದವರು.
713
ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್ ನಲ್ಲಿ ಮುಗಿಸಿ ನಂತರ ಪುಣೆಯಲ್ಲಿ ಡಿಗ್ರಿ ಮಾಡಿದ್ದರು.
ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್ ನಲ್ಲಿ ಮುಗಿಸಿ ನಂತರ ಪುಣೆಯಲ್ಲಿ ಡಿಗ್ರಿ ಮಾಡಿದ್ದರು.
813
ಮೊದಲು ಸಂತೋಷ್ ತಮ್ಮ ದೇಶಸೇವೆ ಆರಂಭಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ. ಹೈದರಾಬಾದ್ಗೆ ವರ್ಗಾವಣೆ ಕೇಳಿದ್ದು ಅದರ ನಿರೀಕ್ಷೆಯಲ್ಲಿದ್ದಾಗಲೇ ಚೀನಾದ ಕುತಂತ್ರಕ್ಕೆ ಬಲಿಯಾಗಿದ್ದಾರೆ.
ಮೊದಲು ಸಂತೋಷ್ ತಮ್ಮ ದೇಶಸೇವೆ ಆರಂಭಿಸಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ. ಹೈದರಾಬಾದ್ಗೆ ವರ್ಗಾವಣೆ ಕೇಳಿದ್ದು ಅದರ ನಿರೀಕ್ಷೆಯಲ್ಲಿದ್ದಾಗಲೇ ಚೀನಾದ ಕುತಂತ್ರಕ್ಕೆ ಬಲಿಯಾಗಿದ್ದಾರೆ.
913
ತಮಿಳುನಾಡಿನ ಯೋಧ ಆದಿತ್ಯ ಪಳನಿ ಪ್ರಾಣತ್ಯಾಗ ಮಾಡಿದ್ದಾರೆ.
ತಮಿಳುನಾಡಿನ ಯೋಧ ಆದಿತ್ಯ ಪಳನಿ ಪ್ರಾಣತ್ಯಾಗ ಮಾಡಿದ್ದಾರೆ.
1013
ತಮಿಳುನಾಡು ಸರ್ಕಾರ ಪಳನಿ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದೆ.
ತಮಿಳುನಾಡು ಸರ್ಕಾರ ಪಳನಿ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದೆ.
1113
ಪಳನಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತಮಿಳು ನಾಡು ಸರ್ಕಾರ ನೀಡಿದೆ.
ಪಳನಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತಮಿಳು ನಾಡು ಸರ್ಕಾರ ನೀಡಿದೆ.
1213
ಕಾರಣವಿಲ್ಲದೇ ಚೀನಾ ಸೈನಿಕರು ದಾಳಿ ಮಾಡಿದ್ದಾರೆ.
ಕಾರಣವಿಲ್ಲದೇ ಚೀನಾ ಸೈನಿಕರು ದಾಳಿ ಮಾಡಿದ್ದಾರೆ.
1313
ವೀರ ಯೋಧರ ಬಲಿದಾನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ವೀರ ಯೋಧರ ಬಲಿದಾನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ