ಗಾಂಧಾರಿ ಕೊಟ್ಟ ಶಾಪ
ಶ್ರೀ ಕೃಷ್ಣನು ಕೌರವ ಮಾತಾ ಗಾಂಧಾರಿಯಿಂದ (Gandhari) ಎರಡನೇ ಶಾಪವನ್ನು ಪಡೆದ. ಮಹಾಭಾರತ ಗ್ರಂಥದ ಪ್ರಕಾರ, ಗಾಂಧಾರಿ ಯುದ್ಧದ ಬಳಿಕ ಕೌರವ ರಾಜವಂಶದ ವಧುಗಳು ಅಳುತ್ತಿರುವುದನ್ನು ಕೇಳಿ, ಶ್ರೀ ಕೃಷ್ಣನನ್ನು ಕುರಿತು ನೀನು ಭಗವಂತ , ನೀನು ಬಯಸಿದರೆ ಈ ವಿಪತ್ತನ್ನು ನಿಲ್ಲಿಸಬಹುದಿತ್ತು. ಯುದ್ಧವಿಲ್ಲದೆಯೂ ಧರ್ಮವನ್ನು ಸ್ಥಾಪಿಸಬಹುದಿತ್ತು, ಆದರೆ ನೀನು ಹಾಗೆ ಮಾಡಿಲ್ಲ ಎಂದು ಹೇಳುತ್ತಾ ಗಾಂಧಾರಿ ಯುದುವಂಶದ ನಾಶವಾಗಲಿ ಎಂದು ಶ್ರೀ ಕೃಷ್ಣನನ್ನು ಶಪಿಸಿದಳು. ಶ್ರೀ ಕೃಷ್ಣನು ಸಹ ಈ ಶಾಪವನ್ನು ಸ್ವೀಕರಿಸಿದನು ಮತ್ತು ತನ್ನ ಕುಲದ ನಾಶವನ್ನು ಸ್ವತಃ ನೋಡಿದನು.