ಇಂಥ ಕೆಲಸ ಮಾಡಿದ್ರೆ ನಿಮ್ಮ ಕೈಲಿ ಹಣ ಉಳಿಯೋಲ್ಲ ಅನ್ನುತ್ತೆ ಗರುಡು ಪುರಾಣ!

First Published Jun 1, 2024, 1:18 PM IST

ಗರುಡ ಪುರಾಣದ ಪ್ರಕಾರ, ಸೂರ್ಯೋದಯದ ನಂತರವೂ ದೀರ್ಘಕಾಲ ಮಲಗುವ ವ್ಯಕ್ತಿ ಜೀವನದಲ್ಲಿ ಯಾವಾಗಲೂ ಹಣದ ಕೊರತೆ ಎದುರಿಸಬೇಕಾಗುತ್ತದೆ. ಇದಲ್ಲದೇ ನೀವು ಮಾಡುವ ಯಾವ ಕೆಲಸದಿಂದ ಬಡತನ ಬಾಧಿಸುತ್ತೆ ಅನ್ನೋದನ್ನು ತಿಳಿಯೋಣ. 
 

18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣವು (Garuda Puran) ಒಂದು ಕಡೆ ಸಾವಿನ ರಹಸ್ಯಗಳ ಬಗ್ಗೆ ಹೇಳಿದರೆ, ಮತ್ತೊಂದೆಡೆ ಅದು ಜೀವನದ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ. ಗರುಡ ಪುರಾಣವು ಪಕ್ಷಿರಾಜ ಗರುಡ ಮತ್ತು ವಿಷ್ಣುವಿನ ನಡುವಿನ ಸಂಭಾಷಣೆಯಾಗಿದ್ದು, ಇದರಲ್ಲಿ ಶ್ರೀಹರಿ ಪ್ರತಿಯೊಂದು ಪ್ರಶ್ನೆಗೆ ವಿವರವಾಗಿ ಉತ್ತರಿಸುತ್ತಾನೆ. ಈ ಮಹಾಪುರಾಣದ ಅಧಿಪತಿ ಸ್ವತಃ ವಿಷ್ಣು, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಈ ಪುರಾಣವನ್ನು ಓದಬೇಕು, ಇದರಿಂದ ಜೀವನವನ್ನು ಸರಳ ಮತ್ತು ಯಶಸ್ವಿಗೊಳಿಸಬಹುದು. 
 

ನೀವು ಯಾವ ಕೆಲಸ ಮಾಡಿದ್ರೆ, ಮನೆಯಲ್ಲಿ ಹಣ, ಆರೋಗ್ಯ ಮತ್ತು ಬಡತನಕ್ಕೆ ಸಂಬಂಧಿಸಿದ ನಷ್ಟವನ್ನು ಎದುರಿಸಬೇಕಾಗಿ ಬರುತ್ತೆ ಮತ್ತು ಅಂತಹ ವಿಷಯಗಳನ್ನು ತಪ್ಪಿಸಲು ಏನು ಮಾಡಬೇಕು ಎಂದು ಈ ಪುರಾಣದಲ್ಲಿ ಹೇಳಲಾಗಿದೆ. ಯಾವ ಕ್ರಿಯೆಗಳಿಂದಾಗಿ ಒಬ್ಬ ವ್ಯಕ್ತಿಯು ಬಡವನಾಗುತ್ತಾನೆ  (poverty) ಎಂದು ತಿಳಿಯೋಣ ...
 

Latest Videos


ಯಾರಿಗೂ ಮೋಸ ಮಾಡಬೇಡಿ, ಅಗೌರವ ತೋರಬೇಡಿ
ಒಬ್ಬ ವ್ಯಕ್ತಿ ಹೆಚ್ಚು ತಿನ್ನುತ್ತಿದ್ದರೆ, ಕೋಪಗೊಂಡರೆ, ಧರ್ಮ, ಬಡವರು ಮತ್ತು ನಿರ್ಗತಿಕರು ಮತ್ತು ಮಹಿಳೆಯರನ್ನು ಅಗೌರವಿಸಿದರೆ (disrespect), ಅಂತಹ ವ್ಯಕ್ತಿಯ ಜೊತೆ ಎಂದಿಗೂ ಸಂಪತ್ತು ನಿಲ್ಲೋದಿಲ್ಲ ಮತ್ತು ಅವನನ್ನು ನರಕದಿಂದ ಯಾರೂ ರಕ್ಷಿಸಲು ಸಾಧ್ಯವಿಲ್ಲ ಎನ್ನಲಾಗುವುದು. ಕಠಿಣ ಪರಿಶ್ರಮದಿಂದ ಗಳಿಸಿದ ಹಣವನ್ನು ಕದಿಯುವ ಮತ್ತು ಜವಾಬ್ದಾರಿಗಳನ್ನು ಪೂರೈಸದ ವ್ಯಕ್ತಿಯ ಮೇಲೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಯಾವತ್ತೂ ಯಾರನ್ನೂ ಅಗೌರವದಿಂದ ಕಾಣಬೇಡಿ.

ಸ್ವಚ್ಚತೆ ಕಾಪಾಡಿಕೊಳ್ಳಿ
ಒಬ್ಬ ವ್ಯಕ್ತಿಯು ಕೊಳಕು ಬಟ್ಟೆಗಳನ್ನು ಧರಿಸಿದರೆ ಅಥವಾ ದೇವರು ಮತ್ತು ದೇವತೆಗಳನ್ನು ಅವಮಾನಿಸಿದರೆ, ಲಕ್ಷ್ಮಿ ದೇವಿಯು (Goddess Lakshmi) ಅವನ ಮೇಲೆ ಕೋಪಗೊಳ್ಳುತ್ತಾಳೆ. ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಚತೆ ಮತ್ತು ಧಾರ್ಮಿಕ ಚಟುವಟಿಕೆಗಳು ನಡೆಯುವ ಮನೆಯಲ್ಲಿ ವಾಸಿಸುತ್ತಾಳೆ. ಹಲ್ಲುಗಳನ್ನು ಸ್ವಚ್ಛಗೊಳಿಸದಿರುವುದು, ಕೊಳಕು ಆಲೋಚನೆಗಳನ್ನು ಹೊಂದಿರುವುದು, ಜನರನ್ನು ಅವಮಾನಿಸುವುದು, ಅಂತಹ ಜನರು ತುಂಬಾ ವಿಷಾದಿಸಬೇಕು, ಹಾಗಾಗಿ ಯಾವಾಗಲೂ ಸ್ವಚ್ಚವಾಗಿರಿ.

ಅಹಂ ಈ ಜನರ ದೊಡ್ಡ ಶತ್ರು
ಹಣ, ಗೌರವ, ಕೆಲಸ ಮುಂತಾದ ವಿಷಯಗಳ ಬಗ್ಗೆ ಅಹಂ (Ego) ಪಡುವ ವ್ಯಕ್ತಿಯು ತನ್ನ ಕ್ರಿಯೆಗಳಿಂದ ಬಡತನವನ್ನು ಆಹ್ವಾನಿಸುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಂತಹ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ, ಇದರಿಂದ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರದಿಂದಾಗಿ  ಹಣವನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಅಂತಹ ವ್ಯಕ್ತಿಯ ಸ್ವಭಾವ ಮತ್ತು ಚಾರಿತ್ರ್ಯದಿಂದ ಲಕ್ಷ್ಮಿ ದೇವಿಯು ಅವನ ಮನೆಯಲ್ಲಿ ಎಂದಿಗೂ ವಾಸಿಸುವುದಿಲ್ಲ, ಆದ್ದರಿಂದ ಒಬ್ಬರು ಎಂದಿಗೂ ಅಹಂಕಾರಿಯಾಗಬಾರದು.

ಇನ್ನೊಬ್ಬರಲ್ಲಿ ನ್ಯೂನತೆ ಹುಡುಕುವ ಜನರ ಬಳಿ ಹಣ ಉಳಿಯಲ್ಲ
ಎಲ್ಲರಿಗೂ ಕೆಟ್ಟದ್ದನ್ನು ಮಾಡುವ ವ್ಯಕ್ತಿ,  ಇನ್ನೊಬ್ಬರನ್ನು ಧೂಷಿಸುವ ವ್ಯಕ್ತಿ, ಮತ್ತು ದಿನವಿಡೀ ಪ್ರತಿಯೊಬ್ಬ ವ್ಯಕ್ತಿಯಲ್ಲಿ ನ್ಯೂನತೆಗಳನ್ನು ಕಾಣುವ ವ್ಯಕ್ತಿಯ ಜೊತೆ ಎಂದಿಗೂ ಲಕ್ಷ್ಮೀ ನೆಲೆಸುವುದಿಲ್ಲ  ಮತ್ತು ಅವನು ಹಣದೊಂದಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೊಬ್ಬರನ್ನು ಕೆಟ್ಟದಾಗಿ ನಡೆಸುವ ಮತ್ತು ಕೆಟ್ಟ ಮಾತುಗಳನ್ನಾಡುವ ಜನರ ಬಳಿ ಹಣ ಉಳಿಯುವುದೇ ಇಲ್ಲ. 

click me!