ಅಮವಾಸ್ಯೆ ದಿನ ಈ ಜಾಗದಲ್ಲಿ ದೀಪ ಹಚ್ಚಿದ್ರೆ ತಿಜೋರಿಯಲ್ಲಿ ಹಣವೋ ಹಣ
ಚೈತ್ರ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಚೈತ್ರ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ ಮತ್ತು ಈ ದಿನದಂದು ಪೂರ್ವಜರಿಗೆ ಪ್ರಾರ್ಥನೆ ಮಾಡುವುದು ಮತ್ತು ದಾನ ನೀಡುವುದರಿಂದ
ಚೈತ್ರ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಚೈತ್ರ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ ಮತ್ತು ಈ ದಿನದಂದು ಪೂರ್ವಜರಿಗೆ ಪ್ರಾರ್ಥನೆ ಮಾಡುವುದು ಮತ್ತು ದಾನ ನೀಡುವುದರಿಂದ
ಚೈತ್ರ ಮಾಸದಲ್ಲಿ ಬರುವಂತಹ ಅಮವಾಸ್ಯೆಯನ್ನು ಚೈತ್ರ ಅಮವಾಸ್ಯೆ *Chaitra Amavasya) ಎನ್ನಲಾಗುವುದು. ಈ ಅಮವಾಸ್ಯೆ ಪೂರ್ವಜರ ಪ್ರಾರ್ಥನೆ ಮಾಡಲು ಉತ್ತಮ ಸಮಯ. ವೈದಿಕ ಕ್ಯಾಲೆಂಡರ್ ಪ್ರಕಾರ, ಚೈತ್ರ ಅಮವಾಸ್ಯೆ ಮಾರ್ಚ್ 29, 2025, ಶನಿವಾರ. ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಅಮಾವಾಸ್ಯೆ ತಿಥಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಅಮವಾಸ್ಯೆಯಂದು ಪೂರ್ವಜರಿಗೆ ನೈವೇದ್ಯ ನೀಡುವುದು ಹಾಗೂ ನಿರ್ಗತಿಕರಿಗೆ ದಾನಗಳನ್ನು (donate people) ನೀಡಿದರೆ, ಜೀವನದಲ್ಲಿನ ಎಲ್ಲಾ ತೊಂದರೆಗಳು ನಿವಾರಣೆಯಾಗಿ ಸಂತೋಷ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ ಎನ್ನುವ ನಂಬಿಕೆ ಇದೆ.
ಚೈತ್ರ ಅಮಾವಾಸ್ಯೆ ಶನಿವಾರದಂದು ಬರುವುದರಿಂದ ಇದನ್ನು ಶನಿ ಅಮಾವಾಸ್ಯೆ (Shani Amavasye)ಎಂದೂ ಕರೆಯುತ್ತಾರೆ. ಇವತ್ತು ಅಂದ್ರೆ ಮಾರ್ಚ್ 29 ರಂದು ಶನಿವಾರ ಚೈತ್ರ ಅಮವಾಸ್ಯೆ. ಹಾಗಾಗಿ ಈ ದಿನ ಏನು ಮಾಡಬೇಕು? ಏನು ಮಾಡಬಾರದು ಅನ್ನೋದನ್ನು ನೋಡೋಣ.
ಶನಿ ಅಮವಾಸ್ಯೆಯಂದು ಶನಿದೇವನನ್ನು (Shani Dev) ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ, ಶನಿಯ ಧೈಯ ಮತ್ತು ಸಾಡೇ ಸಾತಿಯ ಪ್ರಭಾವವೂ ಕಡಿಮೆಯಾಗುತ್ತದೆ. ಹಾಗಾಗಿ ಇವತ್ತು ಭಕ್ತಿಯಿಂದ ಶನಿ ದೇವನಿಗೆ ಪೂಜೆ ಸಲ್ಲಿಸಿ.
ಇದಲ್ಲದೆ, ಚೈತ್ರ ಅಮವಾಸ್ಯೆಯ ದಿನದಂದು ಮನೆಯಲ್ಲಿ ಕೆಲವು ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.ಈ ದೀಪವು ಪಿತೃಗಳನ್ನು ಒಲಿಸಿಕೊಳ್ಳಲು ಇಡುವಂತಹ ದೀಪ.
ಚೈತ್ರ ಅಮಾವಾಸ್ಯೆಯ ದಿನದಂದು ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವುದು (light a lamo in main gate) ಶುಭ ಲಾಭವನ್ನು ತಂದು ಕೊಡುತ್ತದೆ. ಅದು ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ನೀವು ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯವಾಗುತ್ತದೆ.
ಇಷ್ಟೇ ಅಲ್ಲ ನೀವು ಚೈತ್ರ ಅಮವಾಸ್ಯೆಯ ಸಂಜೆ, ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಇದರಿಂದ ಕೂಡ ನಿಮ್ಮ ಜೀವನದ ಸಮಸ್ಯೆಗಳು ನಿವಾರಣೆಯಾಗಿ, ಜೀವನದಲ್ಲಿ ಧನ ಸಂಪತ್ತು ಪಡೆಯಲು ಸಾಧ್ಯ ಆಗುತ್ತೆ.