Akshaya Tritiyaದಂದು ಈ ಕೆಲಸ ಮಾಡಿದ್ರೆ ಎಂದಿಗೂ ಹಣ, ಸಂಪತ್ತಿನ ಕೊರತೆ ಬರೋದೆ ಇಲ್ಲ

Published : Apr 23, 2025, 01:43 PM ISTUpdated : Apr 23, 2025, 02:54 PM IST

ನೀವು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಯೋಗಕ್ಷೇಮವನ್ನು ಪಡೆಯಲು ಬಯಸಿದರೆ, ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ಪರಿಹಾರಗಳನ್ನು ಸಹ ಮಾಡಿ.  

PREV
17
Akshaya Tritiyaದಂದು ಈ ಕೆಲಸ ಮಾಡಿದ್ರೆ ಎಂದಿಗೂ ಹಣ, ಸಂಪತ್ತಿನ ಕೊರತೆ ಬರೋದೆ ಇಲ್ಲ

ಈ ವರ್ಷ ಅಕ್ಷಯ ತೃತೀಯವನ್ನು (Akshaya Tritiya) ಏಪ್ರಿಲ್ 30, 2025 ರಂದು ಆಚರಿಸಲಾಗುವುದು. ಇದನ್ನು ಹಿಂದೂ ಧರ್ಮದಲ್ಲಿ ಅದ್ಭುತವಾದ ಮುಹೂರ್ತ ಎಂದೂ ಕರೆಯುತ್ತಾರೆ. ಏಕೆಂದರೆ ಈ ದಿನವು ತುಂಬಾ ಶುಭಕರವಾಗಿದ್ದು, ಈ ದಿನದಂದು ಯಾವುದೇ ಶುಭ ಕಾರ್ಯಗಳನ್ನು ಮಾಡಲು ಮುಹೂರ್ತ ನೋಡಬೇಕಾದ ಅವಶ್ಯಕತೆ ಇರೋದಿಲ್ಲ. 
 

27

ಅಕ್ಷಯ ತೃತೀಯ ದಿನದಂದು ಕುಬೇರ ದೇವರು ಮತ್ತು ಲಕ್ಷ್ಮಿ ದೇವಿಯನ್ನು (Goddess Lakshmi) ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯು ತನ್ನ ಭಕ್ತರಿಂದ ಸಂತುಷ್ಟಳಾದರೆ, ಆಕೆ ಅವರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ನೀಡಿ ಆಶೀರ್ವದಿಸುತ್ತಾಳೆ ಮತ್ತು ಸಂಪತ್ತನ್ನು ಪಡೆಯಲು ಹೊಸ ಮಾರ್ಗಗಳನ್ನು ತೆರೆಯುತ್ತಾಳೆ. ಆದ್ದರಿಂದ, ಅಕ್ಷಯ ತೃತೀಯ ದಿನದಂದು, ಲಕ್ಷ್ಮಿ ದೇವಿಯನ್ನು ವಿಧಿ ವಿಧಾನದ ಮೂಲಕ ಪೂಜಿಸಿ. ಇದಲ್ಲದೆ, ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡರೆ ಆರ್ಥಿಕ ಲಾಭ ಸಿಗುತ್ತದೆ.
 

37

ಅಕ್ಷಯ ತೃತೀಯ ದಿನದಂದು ಈ ಕ್ರಮಗಳನ್ನು ಅನುಸರಿಸಿ
ಜ್ಯೋತಿಷ್ಯದ ಪ್ರಕಾರ, ಅಕ್ಷಯ ತೃತೀಯ ದಿನದಂದು, ಲಕ್ಷ್ಮಿ ದೇವಿಗೆ ಕೇಸರಿ ಮತ್ತು ಅರಿಶಿನದ ತಿಲಕವನ್ನು ಹಚ್ಚಬೇಕು. ಈ ಪರಿಹಾರವನ್ನು ಅಳವಡಿಸಿಕೊಳ್ಳುವುದರಿಂದ, ಲಕ್ಷ್ಮೀ ದೇವಿ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರನ್ನು ಆಶೀರ್ವದಿಸುತ್ತಾಳೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುತ್ತಾಳೆ.

47

ಅಕ್ಷಯ ತೃತೀಯ ದಿನದಂದು, ಅಗತ್ಯವಿರುವ ವ್ಯಕ್ತಿಗೆ ನೀರು ತುಂಬಿದ ಮಡಕೆಯನ್ನು ದಾನ (pot with water) ಮಾಡಿ. ನೀವು ದೇವಸ್ಥಾನಕ್ಕೂ ದೇಣಿಗೆ ನೀಡಬಹುದು. ಹೀಗೆ ಮಾಡೋದ್ರಿಂದ ಮನೆಯಲ್ಲಿ ಎಂದಿಗೂ ಸಂಪತ್ತು ಮತ್ತು ಆಹಾರದ ಕೊರತೆ ಇರುವುದಿಲ್ಲ.
 

57

ಅಕ್ಷಯ ತೃತೀಯ ದಿನದಂದು ಪೂರ್ವಜರಿಗೆ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ, ಜಾತಕದಲ್ಲಿರುವ ಪಿತೃ ದೋಷ ನಿವಾರಣೆಯಾಗುತ್ತದೆ ಮತ್ತು ಪೂರ್ವಜರ ಆಶೀರ್ವಾದ ಸಿಗುತ್ತದೆ. ಪೂರ್ವಜರ ಆಶೀರ್ವಾದ ಪಡೆದ ವ್ಯಕ್ತಿಗೆ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
 

67

ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಅಕ್ಷಯ ತೃತೀಯ ದಿನದಂದು ನೀವು ಫ್ಯಾನ್, ಛತ್ರಿ, ಸಕ್ಕರೆ ಮತ್ತು ಕಡಲೆ ಹಿಟ್ಟನ್ನು ದಾನ ಮಾಡಬೇಕು. ಇದರಿಂದ ತಾಯಿ ಲಕ್ಷ್ಮಿ ಸಂತುಷ್ಟಳಾಗಿ ತನ್ನ ಭಕ್ತರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತಾಳೆ.
 

77

ಅಕ್ಷಯ ತೃತೀಯ ದಿನದಂದು, ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಏಕಾಕ್ಷಿ ತೆಂಗಿನಕಾಯಿಯನ್ನು ಇರಿಸಿ. ತಾಯಿ ಲಕ್ಷ್ಮಿ ಇದರಿಂದ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಜೀವನದಲ್ಲಿ ಬರುವ ತೊಂದರೆಗಳನ್ನು ನಿವಾರಿಸುತ್ತಾಳೆ.
 

Read more Photos on
click me!

Recommended Stories