ಕಷ್ಟದ ಸಮಯದಲ್ಲಿ ಚಾಣಕ್ಯ ಹೇಳಿದ ಈ 3 ವಿಷ್ಯ ನೆನಪಿನಲ್ಲಿಡಿ!

Published : Jan 24, 2024, 05:40 PM IST

ನೀವು ಜೀವನದಲ್ಲಿ ಕಷ್ಟದ ಸಮಯವನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಚಾಣಕ್ಯನ ಈ 3 ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಇದರಿಂದ ಜೀವನವು ಸುಲಭವಾಗುತ್ತದೆ. ಹಾಗಿದ್ರೆ ಮತ್ಯಾಕೆ ತಡ ಇವತ್ತಿನಿಂದಲೇ ಇದನ್ನು ಜೀವನದಲ್ಲಿ ಅಳವಡಿಸಿ.   

PREV
16
ಕಷ್ಟದ ಸಮಯದಲ್ಲಿ ಚಾಣಕ್ಯ ಹೇಳಿದ ಈ 3 ವಿಷ್ಯ ನೆನಪಿನಲ್ಲಿಡಿ!

ಚಾಣಕ್ಯ ನೀತಿಯು (Chanakya Niti) ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದೆ. ನೀವು ಚಾಣಕ್ಯ ನೀತಿಯನ್ನು ಸಂಪೂರ್ಣವಾಗಿ ಓದಿದರೆ ಮತ್ತು ಅದನ್ನು ಅನುಸರಿಸಿದರೆ, ನೀವು ಸುಲಭವಾಗಿ ಯಶಸ್ಸಿನತ್ತ ಸಾಗಬಹುದು. ಒಂದು ವೇಳೆ ನೀವು ತೊಂದರೆಯಲ್ಲಿದ್ದರೆ ಚಾಣಕ್ಯ ನೀತಿಯ ಯಾವ ಪಾಠಗಳು ನಿಮಗೆ ಸಹಾಯ ಮಾಡುತ್ತವೆ ನೋಡೋಣ. 
 

26

ಚಾಣಕ್ಯ ನೀತಿ ಭಾರತದಲ್ಲಿ ಮಾತ್ರವಲ್ಲದೇ ಅದರ ನೀತಿಗಳಿಂದಾಗಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಾಣಕ್ಯ ನೀತಿ ನಿಮಗೆ ಸಹಾಯ ಮಾಡುತ್ತದೆ. ನೀವು ಚಾಣಕ್ಯ ನೀತಿಯನ್ನು ಸಂಪೂರ್ಣವಾಗಿ ಓದಿದರೆ ಮತ್ತು ಅದನ್ನು ಅನುಸರಿಸಿದರೆ, ನಿಮ್ಮ ಯಶಸ್ಸನ್ನು ಯಾರೂ ತಡೆಯಲು ಸಾಧ್ಯವಿಲ್ಲ.
 

36

ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಿದ್ದಾನೆ, ಅದು ಮನುಷ್ಯನಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಅವುಗಳನ್ನು ಅನುಸರಿಸಿದರೆ ನೀವು ಯಾವತ್ತೂ, ಎಂದಹುದೇ ಸಂದರ್ಭದಲ್ಲೂ ಸೋಲು ಅನುಭವಿಸೋದಿಲ್ಲ. ಚಾಣಕ್ಯ ನೀತಿಯ ಅಂತಹ 3 ವಿಷಯಗಳನ್ನು ತಿಳಿದುಕೊಳ್ಳೋಣ:

46

ಆರೋಗ್ಯ ರಕ್ಷಣೆ 
ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಮೊದಲು ತನ್ನ ಆರೋಗ್ಯದ ಬಗ್ಗೆ (Health Care) ಕಾಳಜಿ ವಹಿಸಬೇಕು, ಏಕೆಂದರೆ ಇದು ಅವನ ಅತಿದೊಡ್ಡ ಸಂಪತ್ತು. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ನೀವು ತೊಂದರೆಯಿಂದ ಹೊರಬರಲು ಸಾಧ್ಯವಾಗುತ್ತದೆ. ನಿಮ್ಮ ಎಲ್ಲಾ ಸವಾಲುಗಳನ್ನು ನೀವು ಜಯಿಸಬಹುದು.

56

ಎಚ್ಚರಿಕೆ ವಹಿಸಬೇಕು
ಚಾಣಕ್ಯ ನೀತಿ ಪ್ರಕಾರ, ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಯು ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಬಿಕ್ಕಟ್ಟಿನ ಸಮಯದಲ್ಲಿ ಒಬ್ಬರು ಹೆಚ್ಚಾಗಿ ಹೆಚ್ಚಿನ ಸವಾಲುಗಳನ್ನು (challenges) ಎದುರಿಸಬೇಕಾಗುತ್ತೆ. ಇದರಿಂದ ಸಣ್ಣ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡಬಹುದು, ಆದ್ದರಿಂದ ಜಾಗರೂಕರಾಗಿರುವುದು ಬಹಳ ಮುಖ್ಯ.

66

ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಗಮನ ಕೊಡಿ
ಆಚಾರ್ಯ ಚಾಣಕ್ಯ (Acharya Chanakya) ಹೇಳುವಂತೆ ಕುಟುಂಬದ ಸದಸ್ಯರ ಜವಾಬ್ದಾರಿಯನ್ನು ಪೂರೈಸುವುದು ವ್ಯಕ್ತಿಯ ಮೊದಲ ಕರ್ತವ್ಯವಾಗಿರಬೇಕು. ಅಲ್ಲದೆ, ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಇದನ್ನು ಮಾಡುವುದರಿಂದ ನೀವು ಯಾವುದೇ ತೊಂದರೆಯಿಂದ ಹೊರಬರಬಹುದು.

Read more Photos on
click me!

Recommended Stories