ಹಿಂದೂ ಧರ್ಮದಲ್ಲಿ ದೇವರ ಅಭಿಷೇಕ ವಿಶೇಷವಾದದ್ದು. ಮೊದಲು ನೀರಿನಿಂದ ದೇವರಿಗೆ ಅಭಿಷೇಕ ಮಾಡಿ ನಂತ್ರ ಪಂಚಾಮೃತದ ಅಭಿಷೇಕ ಮಾಡಲಾಗುತ್ತದೆ. ಪಂಚಾಮೃತಕ್ಕೆ ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಐದು ಅಮೃತ ಸೇರಿಸೋದ್ರಿಂದ ಅದಕ್ಕೆ ಪಂಚಾಮೃತ ಎನ್ನುವ ಹೆಸರು ಬಂದಿದೆ. ಈ ಪಂಚಾಮೃತವನ್ನು ದೇವರಿಗೆ ಅರ್ಪಿಸಿದ್ರೆ ಮಾತ್ರವಲ್ಲ ಅದನ್ನು ನೀವು ಸೇವನೆ ಮಾಡೋದ್ರಿಂದ ಸಾಕಷ್ಟು ಲಾಭವಿದೆ.