ಆಚಾರ್ಯ ಚಾಣಕ್ಯನ ನೀತಿಗಳು ಮಾನವ ಜೀವನವನ್ನು ಯಶಸ್ವಿಗೊಳಿಸಲು ಪ್ರೇರೇಪಿಸುತ್ತವೆ. ಚಾಣಕ್ಯನ ನೀತಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ಮೊದಲಿನಂತೆಯೇ ಇಂದಿಗೂ ಪ್ರಸ್ತುತವಾಗಿವೆ. ಜೀವನದಲ್ಲಿ ಯಶಸ್ಸು (success in life) ಪಡೆಯಲು ಬಯಸಿದರೆ ಒಬ್ಬ ವ್ಯಕ್ತಿಯು ಎಂದಿಗೂ ಯಾವ ವಿಷ್ಯಗಳನ್ನು ಮರೆಯಬಾರದು ಅನ್ನೋದನ್ನು ತಿಳಿಯೋಣ.
ಒತ್ತಡ-ಮುಕ್ತ - ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಿಂದ ಮುಕ್ತನಾಗಿರಬೇಕು (stress free). ಒತ್ತಡ-ಮುಕ್ತವಾಗಿರುವ ಮೂಲಕ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಒಬ್ಬನು ಯಾವಾಗಲೂ ತನ್ನನ್ನು ತಾನು ನಂಬಬೇಕು. ಇದರಿಂದ ಮಾತ್ರ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತೆ.
ದೃಢವಾಗಿ ಎದುರಿಸಿ - ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿಯೊಂದು ಸನ್ನಿವೇಶವನ್ನು ದೃಢವಾಗಿ ಎದುರಿಸಬೇಕು. ಯಾವುದೇ ಕೆಲಸದಲ್ಲಿ ವಿಫಲವಾದರೆ ನಿರಾಶೆಗೊಳ್ಳಬಾರದು. ನೀವು ಯಾವಾಗಲೂ ಪ್ರಯತ್ನಿಸುತ್ತಲೇ ಇರಬೇಕು. ಇದು ಖಂಡಿತವಾಗಿಯೂ ವ್ಯಕ್ತಿಗೆ ಯಶಸ್ಸನ್ನು ನೀಡುತ್ತದೆ.
ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆ ಮಾಡಿ - ಚಾಣಕ್ಯನ ಪ್ರಕಾರ (Chanakya niti), ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಯಾವುದೇ ಕೆಲಸವನ್ನು ಸಣ್ಣದು ಮತ್ತು ಅದರ ಬಗ್ಗೆ ನಿರ್ಲಕ್ಷ್ಯದಿಂದ ಪರಿಗಣಿಸಬಾರದು. ಏಕೆಂದರೆ ಕೆಲಸವನ್ನು ಗಂಭೀರವಾಗಿ ಮಾಡಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತೆ.
ನಕಾರಾತ್ಮಕತೆಯಿಂದ ದೂರವಿರಿ - ಚಾಣಕ್ಯನ ಪ್ರಕಾರ, ಪ್ರತಿಯೊಂದು ಕೆಲಸವನ್ನು ಯಶಸ್ವಿಯಾಗಿಸಲು ಸಕಾರಾತ್ಮಕತೆಯನ್ನು (negative thoughts) ಹೊಂದಿರುವುದು ಬಹಳ ಮುಖ್ಯ. ನಕಾರಾತ್ಮಕ ಆಲೋಚನೆಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇವು ಅವನ ಯಶಸ್ಸಿಗೆ ಅಡ್ಡಿಯಾಗಬಹುದು. ಆದುದರಿಂದ ಪಾಸಿಟಿವ್ ಆಗಿ ಯೋಚನೆ ಮಾಡೋದು ಉತ್ತಮ.
ತಪ್ಪುಗಳಿಂದ ಕಲಿಯಿರಿ : ತಪ್ಪು ಮಾಡೋದು ಸಾಮಾನ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೆಲಸಗಳಲ್ಲಿ ತಪ್ಪು ಮಾಡಿರುತ್ತಾರೆ. ಆದರೆ ಆ ತಪ್ಪುಗಳಿಂದ ನೀವು ಕಲಿಯಬೇಕಾದ್ದು ಮುಖ್ಯ. ಹೌದು, ತಪ್ಪುಗಳಿಂದ ಕಲಿತಾಗ ಮಾತ್ರ ಜೀವನದಲ್ಲಿ ಉತ್ತಮ ರೀತಿಯಲ್ಲಿ ಹೆಜ್ಜೆ ಇಡಲು ಸಾಧ್ಯವಾಗುತ್ತೆ.