ಉಡುಪಿ: ಶ್ರದ್ಧಾ ಭಕ್ತಿಯ ಕೃಷ್ಣಜನ್ಮಾಷ್ಟಮಿ ಆಚರಣೆ; ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ

Published : Sep 07, 2023, 12:30 PM ISTUpdated : Sep 07, 2023, 12:31 PM IST

ರಾಜ್ಯಾದ್ಯಂತ ಬುಧವಾರ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಮೂಡಿತ್ತು. ಅದರಲ್ಲೂ ದೇವಾಲಯಗಳ ನಗರಿ ಉಡುಪಿಯ ಶ್ರೀಕೃಷ್ಣ ಮಠ ಹಬ್ಬದ ರಂಗಿನಿಂದ ಕಂಗೊಳಿಸಿದೆ.. ದೇಗುಲದ ತುಂಬೆಲ್ಲಾ ವಿಶೇಷ ಅಲಂಕಾರ, ಭಕ್ತರಿಂದ ಜಪ ತಪ, ಪುರದ ತುಂಬ ಹುಲಿ ವೇಷಗಳ ಕಲರವ,  ಕಡೆಗೋಲು ಕೃಷ್ಣನ(Krishna) ನಗರಿಯಲ್ಲಿ ಎರಡು ದಿನ ಸಂಭ್ರಮ ಮನೆಮಾಡಿದೆ.

PREV
17
ಉಡುಪಿ: ಶ್ರದ್ಧಾ ಭಕ್ತಿಯ ಕೃಷ್ಣಜನ್ಮಾಷ್ಟಮಿ ಆಚರಣೆ; ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ

ಕೃಷ್ಣಮಠದಲ್ಲಿ ಮಧ್ಯರಾತ್ರಿ 11.42ಕ್ಕೆ ಕೃಷ್ಣನ ಅವತಾರ ಗಳಿಗೆಯಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು. ನಂತರ ಹೊರಗೆ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು ಶ್ರೀಗಳು

27

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದಲೂ ಅರ್ಘ್ಯ ಪ್ರದಾನ ಬಳಿಕ ಸಾರ್ವಜನಿಕರಿಂದ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಿತು. ಇದರೊಂದಿಗೆ ಭಕ್ತಿಶೃದ್ಧೆಯ ಕೃಷ್ಣ ಜನ್ಮಾಷ್ಟಮಿ ಸಂಪನ್ನ.

37

ಇಂದು ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವ - ಮೊಸರುಕುಡಿಕೆ ಆಚರಣೆ ನಡೆಯಲಿದೆ  ಶ್ರೀ ಕೃಷ್ಣಮಠವು ವಿಶೇಷ ಹೂವಿನ ಅಲಂಕೃತಗೊಂಡಿದ್ದು, ಇಂದು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣಮಠಕ್ಕೆ ಆಗಮಿಸಿ ಅಲಂಕೃತ ಬಾಲ ಕೃಷ್ಣನ ದರ್ಶನ ಪಡೆದರು. ಕೃಷ್ಣ ಜಯಂತಿಯ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಮೊಸರು ಮೆಲ್ಲುತ್ತಿರುವ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. 

ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಉತ್ಸವ, ಭಕ್ತರಿಗೆ ಕೃಷ್ಣನಿಗೆ ಅಪ್ರಿಸಿದ ಲಡ್ಡುಚಕ್ಕುಲಿ ಪ್ರಸಾದದ ವಿತರಣೆ ನಡೆಯಲಿದೆ

47

ರಥಬೀದಿಯಲ್ಲಿ ಹೊರಜಿಲ್ಲೆಗಳಿಂದ ಬಂದ 20ಕ್ಕೂ ಹೆಚ್ಚು ಮಂದಿ ಹೂ-ಹಣ್ಣಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಈ ಬಾರಿ ಮಳೆ ಇಲ್ಲದೇ ಇರುವುದು ಈ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಯಿತು.

57

ಉಡುಪಿ ಅಂದರೆ ಕೃಷ್ಣಮಠ, ಕೃಷ್ಣಮಠವೆಂದರೆ ಅಷ್ಟಮಿ, ಅಷ್ಟಮಿ ಅಂದರೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು. ಹೀಗೊಂದು ಭಾವನೆ ಮೂಡುವುದಕ್ಕೆ ಕಾರಣವೂ ಇದೆ, ವಿಟ್ಲಪಿಂಡಿ ಆಚರಣೆಗೆ ಹೊಸ ಆಯಾಮ ಕೊಟ್ಟವರು ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮಿವರ ತೀರ್ಥ ಸ್ಚಾಮಿಗಳು. ಅಷ್ಟಮಿಯ ದಿನ ಆರ್ಘ್ಯ ಪ್ರದಾನ ಮುಗಿದ ನಂತರ, ಶ್ರೀ ಕೃಷ್ಣ ಲೀಲೋತ್ಸವದ ಸಂಭ್ರಮ ರಥ ಬೀದಿಯನ್ನು ಆವರಿಸಿಬಿಡುತ್ತದೆ. ಅನೇಕ ಮಂದಿ ಉಪವಾಸ, ಪೂಜೆ ಪುನಸ್ಕಾರಗಳ ಮೂಲಕ ಕೃಷ್ಣ ನ ಆರಾಧನೆ ಮಾಡಿದರೆ, ಕಲಾರಾಧನೆಯ ಮೂಲಕ ಕೃಷ್ಣನ ಪೂಜೆ ಮಾಡುವವರು ಸಾವಿರಾರು ಮಂದಿ. ಹರಕೆ ಹೊತ್ತು ವೇಷ ಧರಿಸಿ ಕೃಷ್ಣ ನ ಸೇವೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ.

67

ಭಗವಾನ್ ಶ್ರೀಕೃಷ್ಣ ಪರಮಾತ್ಮ ಮಥುರಾದಲ್ಲಿ ಮಧ್ಯರಾತ್ರಿಯಲ್ಲೇ ಜನಿಸಿದ ಸಮಯಕ್ಕೇ ಸರಿಯಾಗಿ ವಿಧಾನಸಭಾ ಸ್ಪೀಕರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಉಡುಪಿ ಮಠಕ್ಕೆ ದಿಢೀರ್ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು. 

77

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಮಕ್ಕಳು ಬಾಲಕೃಷ್ಣ ವೇಷದಲ್ಲಿ ಮುದ್ದುಮುದ್ದಾಗಿ ಕಂಡುಬಂದರು. ಪೋಷಕರು ತಮ್ಮ ಮಕ್ಕಳಿಗೆ ಕಡೆಗೋಲು ಕೃಷ್ಣ, ಗೋಪಿಕೆ, ರಾಧೆಯಂತೆ ಸಿಂಗರಿಸಿ ರಥಬೀದಿಯಲ್ಲಿ ಓಡಾಡುತ್ತಿದ್ದರೆ ನೋಡುವುದೇ ಚೆಂದ. ಅದೆಷ್ಟು ಅವತಾರಗಳಲ್ಲಿ ಶ್ರೀಕೃಷ್ಣ ಪರಮಾತ್ಮ ಆಹಾ ಅನಿಸುವಂತಿತ್ತು.

Read more Photos on
click me!

Recommended Stories