ಕೃಷ್ಣನಿಗಾಗಿ 116 ಬಗೆಯ ವಿವಿಧ ಖಾದ್ಯ ಬಡಿಸಿದ ಭಕ್ತೆ ಮಂಗಳೂರಿನ ಚಂದ್ರಮತಿ ಎಸ್ ರಾವ್

First Published Aug 27, 2024, 2:46 PM IST

ದೇಶಾದ್ಯಂತ ಹಿಂದೂಗಳು ಅತ್ಯಂತ ವೈಭವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಆಚರಿಸಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯು ಹಿಂದೂಗಳ ಅತ್ಯಂತ ಪವಿತ್ರ, ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. 

ದೇಶಾದ್ಯಂತ ಹಿಂದೂಗಳು ಅತ್ಯಂತ ವೈಭವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಆಚರಿಸಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯು ಹಿಂದೂಗಳ ಅತ್ಯಂತ ಪವಿತ್ರ, ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. 

ಭಕ್ತರು ಜನ್ಮಾಷ್ಟಮಿಯ ಇಂದು ಇಡೀದಿನ ಉಪವಾಸವನ್ನು ಆಚರಿಸಿ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸುತ್ತಾರೆ. ಬಾಲ ಕೃಷ್ಣನಿಗಾಗಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ, ಕೃಷ್ಣನ ಮೂರ್ತಿಗಳನ್ನು, ಬಾಲಕೃಷ್ಣನನ್ನ  ಸುಂದರವಾಗಿ ಅಲಂಕರಿಸಿ ನೈವೇದ್ಯ ಮಾಡುತ್ತಾರೆ.

Latest Videos


ಶ್ರೀಕೃಷ್ಣನ ಭಕ್ತೆಯಾದ ಮಂಗಳೂರಿನ ರಥಬೀದಿಯ ಚಂದ್ರಮತಿ ಎಸ್‌ ರಾವ್ ಅವರು ಈ ಬಾರಿ  ಕೃಷ್ಣನಿಗಾಗಿ 116 ಬಗೆಯ ಕಜ್ಜಾಯ ಖಾದ್ಯಗಳನ್ನು ಮಾಡಿ ಭಕ್ತಿಯಿಂದ ಸಮರ್ಪಿಸಿದ್ದಾರೆ. 

ಪ್ರತಿವರ್ಷವೂ ಕೃಷ್ಣ ಜನ್ಮಾಷ್ಟಮಿಯಂದು ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾ ಬಂದಿರುವ ಚಂದ್ರಮತಿ ಎಸ್‌ರಾವ್ ಈ ಬಾರಿಯೂ 116 ಬಗೆಯ ವಿವಿಧ ಕಜ್ಜಾಯ ತಯಾರಿಸಿದ್ದಾರೆ. ಖಾದ್ಯ ತಯಾರಿಸಿ ಶ್ರೀಕೃಷ್ಣನ ಮುಂದೆ ನೈವೇದ್ಯ ಇಟ್ಟಿರುವ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

click me!