ಪುರಾಣದ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವು ಭೂಮಿಯ ಮೇಲೆ ಅವತರಿಸಿದಾಗ, ಅವನು ತನ್ನೊಂದಿಗೆ ತಾಯಿ ಲಕ್ಷ್ಮಿ, ತೆಂಗಿನ ಮರ ಮತ್ತು ಹಸು ಕಾಮಧೇನುವನ್ನು ತಂದನು. ಹಾಗಾಗಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ತ್ರಿದೇವ ಬ್ರಹ್ಮ, ವಿಷ್ಣು ಮತ್ತು ಮಹೇಶ ಇದರಲ್ಲಿ ನೆಲೆಸಿದ್ದಾರೆ. ತೆಂಗಿನಕಾಯಿಯ ಮೇಲಿನ ಮೂರು ರಂಧ್ರವನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಬಿಳಿಭಾಗವು ದೇವಿ ಪಾರ್ವತಿಯನ್ನು ಸಂಕೇತಿಸುತ್ತದೆ, ನೀರು ಗಂಗೆಯನ್ನು ಸೂಚಿಸುತ್ತದೆ ಮತ್ತು ಕಂದು ಬಣ್ಣದ ಚಿಪ್ಪು ಭಗವಂತ ಕಾರ್ತಿಕೇಯನನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತದೆ.