ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರರು ಮುರುಗನನ್ನು ವರ್ಣಿಸುತ್ತಾ, " ಉರುವೈ ಅರುವಾಯ್ ಉಳಧಯೈ ಇಳಧಾಯ್--ಓ ಮುರುಗ, ನೀನು ರೂಪವನ್ನುಳ್ಳವನು ಮತ್ತು ಅರೂಪನೂ ಹೌದು. ಎಲ್ಲವನ್ನೂ ನಿನ್ನಲ್ಲಿ ಹೊಂದಿರುವವನು, ಅದೇ ಸಮಯದಲ್ಲಿ ನೀನು ಪೂರ್ಣವಾಗಿ ಖಾಲಿಯಾಗಿರುವವನು. ಅತೀ ಸಣ್ಣದ್ದರಲ್ಲೂ ಇರುವವನು ನೀನು. ಮರುವೈ ಮಲರಾಯ್ ಮಣಿಯೈ ಒಲಿಯಾಯ್--- ಹೂವಿನಲ್ಲಿ, ಗಂಟೆಯ ನಾದದಲ್ಲಿ, ಬೆಳಕಾಗಿ ಇರುವೆ.