ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯು ಮನುಷ್ಯರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಗುರುವನ್ನು ಜ್ಞಾನ, ಸಂಪತ್ತು, ಅದೃಷ್ಟ ಮತ್ತು ಆಧ್ಯಾತ್ಮಿಕತೆಯ ಕಾರಕ ಎನ್ನಾದರೆ, ಮಂಗಳನನ್ನು ಧೈರ್ಯ, ಶಕ್ತಿ ಮತ್ತು ಭೂಮಿಯ ಕಾರಕ ಎಂದು ಪರಿಗಣಿಸಲಾಗುತ್ತದೆ.
ಸೆಪ್ಟೆಂಬರ್ 19 ರಂದು ಮಂಗಳ ಗ್ರಹವು ಕಟಕ ರಾಶಿಯನ್ನು ಪ್ರವೇಶಿಸಲಿದೆ. ಈಗಾಗಲೇ ಇದೇ ರಾಶಿಯಲ್ಲಿ ಗುರು ಇರುವುದರಿಂದ, ಈ ಎರಡೂ ಗ್ರಹಗಳ ಅಪರೂಪದ ಸಂಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಮುಂದಿನ ಒಂದೂವರೆ ತಿಂಗಳ ಕಾಲ ಕೆಲವು ರಾಶಿಯವರ ಜೀವನದಲ್ಲಿ ಪ್ರಗತಿ, ಆದಾಯ ಹೆಚ್ಚಳ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.