ಕೊಳಲು(Flute)
ಕೃಷ್ಣ ಎಂದು ನೆನೆದರೆ ಸಾಕು, ಕೊಳಲಿನ ಸುಮಧುರ ರಾಗ ನಮ್ಮ ಮನದಲ್ಲಿ ಮೂಡುತ್ತದೆ. ಕೊಳಲಿಲ್ಲದೆ ಶ್ರೀ ಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಆತನ ಕೊಳಲು ಪ್ರೀತಿಯಿಂದಲೇ ಅವನನ್ನು ಮುರಳೀಧರ, ಬನ್ಸಿವಾಲೆ, ಬನ್ಶಿಧರ್, ಬಸುರಿ ವಾಲೆ ಮತ್ತು ಬನ್ಸಿ ಬಾಜಯ್ಯ ಎಂದೆಲ್ಲ ಕರೆಯಲಾಗುತ್ತದೆ. ಆದುದರಿಂದ ಜನ್ಮಾಷ್ಟಮಿಯ ದಿನ ಖಂಡಿತವಾಗಿ ಕೊಳಲನ್ನು ಮನೆಗೆ ತರಬೇಕು. ದೇವರಿಗೆ ಸಣ್ಣ ಮರದ ಅಥವಾ ಬೆಳ್ಳಿಯ ಕೊಳಲನ್ನು ಅರ್ಪಿಸಿ, ನಂತರ ಅದನ್ನು ನಿಮ್ಮ ಸುರಕ್ಷಿತ ಅಥವಾ ಪೂಜಾ ಸ್ಥಳದಲ್ಲಿ ಬೀರುಗಳಲ್ಲಿ ಇರಿಸಿ.