ದಂತಕಥೆಗಳ ಪ್ರಕಾರ, ಶೂರ್ಪನಖಿಯು ರಾವಣನನ್ನು (Ravana) ಉದ್ದೇಶಪೂರ್ವಕವಾಗಿಯೇ ಕೆರಳಿಸಿ, ಸೀತೆಯನ್ನು ಅಪಹರಿಸಿ ತನ್ನ ಪತ್ನಿಯನ್ನಾಗಿ ಮಾಡಿಕೊಳ್ಳುವ ಪಾಪವನ್ನು ಮಾಡುವಂತೆ ಕೇಳಿಕೊಂಡಳು. ಇದಕ್ಕೆ ಕಾರಣ ಗಂಡನ ಹತ್ಯೆ. ಹೌದು, ಯುದ್ಧದ ಸಮಯದಲ್ಲಿ ರಾವಣನು ಶೂರ್ಪನಖಿಯ ಪತಿ ವಿದ್ಯುತ್ಜೀವನನ್ನು ಕೊಂದಿದ್ದನು. ಇದರಿಂದ ಶೂರ್ಪನಖಿಯು ರಾವಣನನ್ನು ನಾಶಮಾಡಲು ಬಯಸಿದ್ದಳು.