ಮನೆಯಲ್ಲಿ ಜಗಳ, ಸಂಕಟ ದೂರ ಮಾಡಲು ಈ ಸುಲಭ ಮಾರ್ಗ ಟ್ರೈ ಮಾಡಿ!

First Published Apr 30, 2021, 6:42 PM IST

ಸಂಸಾರಕ್ಕಿಂತ ದೊಡ್ಡ ಸುಖ ಜಗತ್ತಿನಲ್ಲಿ ಇಲ್ಲ. ಮನುಷ್ಯ ಯಾವಾಗಲೂ ತನ್ನ ಸಮಸ್ಯೆಗಳೊಂದಿಗೆ, ದಣಿದು, ಅಸಮಾಧಾನಗೊಂಡು ಮನೆಗೆ ಬರುತ್ತಾನೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೊಂದಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿ ಇದೆ ಎಂದೆನಿಸುವಾಗ, ಮನೆಯಲ್ಲಿ ಆಗಾಗ್ಗೆ ವಿರಸ ಮತ್ತು ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯಲ್ಲಿ ನಿತ್ಯ ಈ ಜಗಳಗಳು ಕೆಲವೊಮ್ಮೆ ಮನೆ ಒಡೆಯುವಂತೆ ಮಾಡುತ್ತವೆ. ಅಂತಹ ಸಂದರ್ಭದಲ್ಲಿ, ಮನೆಯಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು  ಕೆಲವು ಸರಳ ಮಾರ್ಗಗಳು ಇಲ್ಲಿವೆ.

ಮನೆಯಲ್ಲಿ ಸಂಕಟವನ್ನು ನಿವಾರಿಸಲು ಕ್ರಮನಿತ್ಯ ಜಗಳಗಳು, ಸಂಕಟಗಳು ಇರುವ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ. ಇದಕ್ಕೆ ವಾಸ್ತು ದೋಷ, ಗ್ರಹ ದೋಷಗಳು, ಶನಿಯ ದುಷ್ಟ ದೃಷ್ಟಿ ಹೀಗೆ ಅನೇಕ ಕಾರಣಗಳಿರಬಹುದು. ಆದರೆ ಈ ಸುಲಭ ಕ್ರಮಗಳಿಂದ ಖಂಡಿತವಾಗಿಯೂ ಮನೆಯಲ್ಲಿ ಮತ್ತೆ ಶಾಂತಿಯ ವಾತಾವರಣಸೃಷ್ಟಿಸಬಹುದು.
undefined
ಮನೆಯ ಸಂಕಟನಿವಾರಿಸಲು ಕರ್ಪೂರಸಹಾಯ ಮಾಡಬಹುದು. ಒಂದು ಹಿತ್ತಾಳೆ ಪಾತ್ರೆಯಲ್ಲಿ ಕರ್ಪೂರವನ್ನು ತೆಗೆದುಕೊಂಡು ರಾತ್ರಿ ಮಲಗುವ ಮೊದಲು ಶುದ್ಧ ಹಸುವಿನ ತುಪ್ಪದಲ್ಲಿ ಅದ್ದಿ ಉರಿಸಿ. ಈ ಕ್ರಮದಿಂದ ಮನೆಯ ಸಂಕಟ ನಿವಾರಣೆ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ತರುತ್ತದೆ.
undefined
ವಾರದಲ್ಲಿ ಒಂದು ದಿನ ಕರ್ಪೂರ ಹಚ್ಚಿ ಮನೆಯಲ್ಲಿ ಹೊಗೆ ನೀಡುವುದರಿಂದ ಮನೆಯಲ್ಲಿ ಸಂಕಟಗಳು ಉಂಟಾಗದೆ ಶಾಂತಿ ಸೃಷ್ಟಿಯಾಗುತ್ತದೆ.
undefined
ಮಂಗಳವಾರ ಹನುಮಾನ್ ಜೀ ಮುಂದೆ ಪಂಚಮುಖಿ ದೀಪಹಚ್ಚಿ ಅಷ್ಟಗಂಧವನ್ನು ಬೆಳಗಿಸುವ ಮೂಲಕ ಅದರ ಸುವಾಸನೆಯನ್ನು ಮನೆಯಾದ್ಯಂತ ಹರಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿತುಂಬುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.
undefined
ಕೇಸರಿ ಪರಿಹಾರಗಳು ವಿರಸವನ್ನು ನಿಭಾಯಿಸುವಲ್ಲಿ ಪ್ರಯೋಜನಕಾರಿ. ಇದಕ್ಕಾಗಿ ಒಂದು ಚಿಟಿಕೆ ಕೇಸರಿಯನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ.
undefined
ಸ್ನಾನದ ನಂತರ ಪೂಜೆಯನ್ನು ಮಾಡಿ ನಂತರ ಕೇಸರಿ ತಿಲಕವನ್ನು ಹಚ್ಚಿ. ಕೇಸರಿ ಹಾಲು ಕುಡಿಯುವುದರಿಂದಲೂ ಮನೆಗೆ ಶಾಂತಿ ನೆಲೆಸುತ್ತದೆ.
undefined
ಮನೆಯಲ್ಲಿ ವಿರಸ ಮತ್ತು ಸಂಕಟವನ್ನು ನಿವಾರಿಸಲು ಉಪ್ಪಿನ ಪರಿಹಾರವೂ ಸಹಕಾರಿ.ಇದಕ್ಕಾಗಿ ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮನೆಯೆಲ್ಲಾ ಒರೆಸಿ. ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕತೆ ನಿವಾರಣೆ ಮತ್ತು ವಾಸ್ತು ದೋಷವೂ ನಿವಾರಣೆ ಆಗುತ್ತದೆ .
undefined
ಸದಾ ವಿರಸ ಮತ್ತು ಸಂಕಟಗಳು ಇರುವ ಮನೆಗಳಲ್ಲಿ, ಶಾಂತಿ ಮತ್ತು ಸಂತೋಷಕ್ಕಾಗಿ ತಿಂಗಳಿಗೊಮ್ಮೆ ಸತ್ಯನಾರಾಯಣ ಕಥೆಓದಿ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲಿದೆ.
undefined
click me!