ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ!

First Published Jul 3, 2021, 9:23 AM IST

ಅನೇಕ ಮನೆಗಳಲ್ಲಿ ತುಳಸಿ ಸಸ್ಯ ಕಂಡು ಬರುತ್ತದೆ. ಜನರು ಅದಕ್ಕೆ ನೀರು ಅರ್ಪಿಸುತ್ತಾರೆ, ಸಂಜೆ ದೀಪ ಬೆಳಗುತ್ತಾರೆ. ಅಸಲಿಗೆ ತುಳಸಿ ಎಂದರೆ ವಿಷ್ಣುವಿಗೆ ತುಂಬಾ ಪ್ರಿಯ. ಆದ್ದರಿಂದ, ತುಳಸಿಗೆ ಆರತಿ ಮಾಡುವ ಮೂಲಕ ನೀರು ಅರ್ಪಿಸುವುದರಿಂದ ತುಳಸಿ ದೇವಿಯೊಂದಿಗೆ, ವಿಷ್ಣು ಮತ್ತು ಲಕ್ಷ್ಮಿ ದೇವಿಯೂ ಸಹ ಅವರ ಆಶೀರ್ವಾದವನ್ನು ಸುರಿಸುತ್ತಾರೆ. 

ನಿರ್ಜಲ ಏಕಾದಶಿ ಮತ್ತು ಎಲ್ಲಾ ಏಕಾದಶಿಗಳು ವಿಷ್ಣುವಿಗೆ ಅರ್ಪಿತವಾಗಿವೆ. ಈ ಸಂದರ್ಭದಲ್ಲಿ ವಿಷ್ಣುವಿನ ಪ್ರೀತಿಯ ತುಳಸಿಯನ್ನು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುವುದು ಬಹಳ ಮುಖ್ಯ. ಅದರಲ್ಲೂ ತುಳಸಿಗೆ ನೀರು ಅರ್ಪಿಸುವ ಬಗ್ಗೆ ತಪ್ಪದೇ ತಿಳಿಯಿರಿ.
undefined
ತುಳಸಿಗೆ ನೀರು ಅರ್ಪಿಸುವ ನಿಯಮಗಳು:
undefined
- ತುಳಸಿ ಸಸ್ಯಕ್ಕೆ ಭಾನುವಾರ ಮತ್ತು ಏಕಾದಶಿ ದಿನದಂದು ಎಂದಿಗೂ ನೀರು ಹಾಕಬಾರದು. ಈ ಎರಡೂ ದಿನಗಳಲ್ಲಿ ತುಳಸಿ ವಿಷ್ಣುವಿಗೆ ಉಪವಾಸ ಮಾಡುತ್ತಾಳೆ ಎಂದು ನಂಬಲಾಗಿದೆ.
undefined
ತುಳಸಿ ಉಪವಾಸ ಮಾಡುವಂತಹ ಪರಿಸ್ಥಿತಿಯಲ್ಲಿ, ನೀರನ್ನು ಅರ್ಪಿಸುವ ಮೂಲಕ ಅವರ ಉಪವಾಸವನ್ನು ಮುರಿಯಲಾಗುತ್ತದೆ ಮತ್ತು ತುಳಸಿ ಸಸ್ಯವು ಒಣಗಿ ಹೋಗುತ್ತದೆ.
undefined
- ಉಳಿದ ದಿನಗಳಲ್ಲಿ ತುಳಸಿ ಸಸ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಅರ್ಪಿಸಿ. ತುಂಬಾ ಕಡಿಮೆ ಅಥವಾ ಹೆಚ್ಚು ನೀರು ಸಸ್ಯವನ್ನು ಹಾನಿಗೊಳಿಸುತ್ತದೆ.
undefined
- ಸಾಮಾನ್ಯ ದಿನಗಳಲ್ಲಿ ಒಂದು ದಿನ ಬಿಟ್ಟು, ಇನ್ನೊಂದು ದಿನ ತುಳಸಿಗೆ ನೀರು ನೀಡಬಹುದು. ಅದೇ ಸಮಯದಲ್ಲಿ, ಮಳೆಗಾಲದಲ್ಲಿ, ವಾರಕ್ಕೆ ಎರಡು ಬಾರಿ ಮಾತ್ರ ತುಳಸಿಗೆ ನೀರು ಹಾಕಿ.
undefined
- ತುಳಸಿ ಸಸ್ಯವು ತುಂಬಾ ಶೀತ ಅಥವಾ ಶಾಖದಿಂದಾಗಿ ನಾಶವಾಗುತ್ತದೆ, ಆದ್ದರಿಂದ ಸಸ್ಯದ ಸುತ್ತಲೂ ಒದ್ದೆಯಾದ ಬಟ್ಟೆಯನ್ನು ಹಾಕಬಹುದು. ಭಾರೀ ಮಳೆಯಿಂದಲೂ ತುಳಸಿಯನ್ನು ಉಳಿಸಬೇಕು.
undefined
click me!