ದೋಷ ಅಳಿಸಿ, ಅದೃಷ್ಟ ಮೆರೆಸೋ ಕಪ್ಪು ದಾರ! ಯಾವ ಕಾಲಿಗೆ ಕಟ್ಟಬೇಕು?

First Published Nov 3, 2022, 1:02 PM IST

ಕಪ್ಪು ದಾರವನ್ನು ಕಾಲು, ಕೈ, ಕತ್ತು, ಸೊಂಟಕ್ಕೆ ಕಟ್ಟುವ ಆಚರಣೆ ಇದೆ. ಜ್ಯೋತಿಷ್ಯದ ಪ್ರಕಾರ, ಕಪ್ಪು ದಾರ ಕಟ್ಟುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕಾಲಿಗೆ ಕಟ್ಟುವ ಕಪ್ಪುದಾರದ ಲಾಭ, ಧರಿಸುವ ನಿಯಮ ಎಲ್ಲವನ್ನೂ ತಿಳಿಸುತ್ತೇವೆ..

ಕಾಲಿಗೆ ಕಪ್ಪು ದಾರ ಕಟ್ಟುವ ಪದ್ಧತಿ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ನಮ್ಮ ಪೂರ್ವಜರ ಕಾಲದಿಂದಲೂ ಬಹಳ ಮುಖ್ಯ ದೋಷ ನಿವಾರಕವಾಗಿ ನಡೆದುಬಂದಿದೆ. ಕೇವಲ ಕಾಲಿಗಷ್ಟೇ ಅಲ್ಲ, ಕೈ, ಕತ್ತು, ಸೊಂಟದಲ್ಲಿ ಕೂಡಾ ಕಪ್ಪು ದಾರವನ್ನು ಧರಿಸಲಾಗುತ್ತದೆ. ಸಧ್ಯ ಕಾಲಿಗೆ ಕಟ್ಟುವ ದಾರದ ಬಗ್ಗೆ ವಿವರ ತಿಳಿಯೋಣ. ಕಪ್ಪು ದಾರವನ್ನು ಧರಿಸುವುದು ನಿರ್ದಿಷ್ಟವಾಗಿ ಹಲವಾರು ಪ್ರಯೋಜನಗಳನ್ನು ಹೊಂದಿದೆ:

ಇದು ವ್ಯಕ್ತಿಯ ಜೀವನವನ್ನು ಸುಧಾರಿಸುತ್ತದೆ, ವಿಶೇಷವಾಗಿ ಕಾಲಿನ ಮೇಲೆ ಗಂಟು ಹಾಕಿದಾಗ, ಇದು ಹೆಚ್ಚು ಮಹತ್ವ ಪಡೆಯುತ್ತದೆ.
ಪುಟ್ಟ ಮಗುವಿಗೆ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ದೃಷ್ಟಿ ದೋಷ ನಿವಾರಣೆಯಾಗುವುದು. ಮಗು ಹಟ ಮಾಡುವುದು ಕಡಿಮೆಯಾಗುತ್ತದೆ. 
ಯುವಕರು ಅದನ್ನು ಧರಿಸಿದರೆ, ಅದು ರಕ್ಷಣೆಯ ಮೂಲ ಉದ್ದೇಶವನ್ನು ಹೊಂದಿರುತ್ತದೆ.
ಇದು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಕಣ್ಣಿನಿಂದ ತಡೆಯುತ್ತದೆ.
 

ಇದು ನಮ್ಮ ಜೀವನದಲ್ಲಿ ಶನಿಯ ಶಕ್ತಿಯನ್ನು ಸಮತೋಲನಗೊಳಿಸುವುದನ್ನು ಸಂಕೇತಿಸುತ್ತದೆ. 
ಕಪ್ಪು ದಾರವು ಅದೃಷ್ಟವನ್ನು ತರುತ್ತದೆ ಮತ್ತು ರಾಹು ಕೇತುಗಳ ದುಷ್ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಇವಷ್ಟೇ ಅಲ್ಲದೆ, ಕಪ್ಪು ದಾರದಿಂದ ಆರೋಗ್ಯಕ್ಕೆ ಅನೇಕ ಲಾಭಗಳಾಗುತ್ತವೆ ಎಂಬ ನಂಬಿಕೆಯೂ ಇದೆ. 

ದೃಷ್ಟಿಗೆ ಮಹಾಮದ್ದು
ಭಾರತದಲ್ಲಿ, ಅನೇಕ ನಕಾರಾತ್ಮಕ ಜನರು ದುಷ್ಟ ಉದ್ದೇಶಗಳನ್ನು ಹೊಂದಿರುತ್ತಾರೆ. ಇತರರಿಗೆ ಹಾನಿಯನ್ನುಂಟು ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ಉದಾಹರಣೆಗೆ, ಅವರು ಬೇರೊಬ್ಬರ ಸಂತೋಷ ಮತ್ತು ಸಂಪತ್ತಿನ ಬಗ್ಗೆ ಅಸೂಯೆ ಪಟ್ಟಾಗ ಅವರಿಗೆ ಕೆಟ್ಟ ಕಣ್ಣು ಇರುತ್ತದೆ. ಅವರು ಯಾರದಾದರೂ ಮೇಲೆ ಕಣ್ಣು ಹಾಕಿದಾಗ ದೃಷ್ಟಿಯಾಗುತ್ತದೆ. ಯಾರಾದರೂ ನಿಮ್ಮನ್ನು ಮೆಚ್ಚಿದರೂ, ಅವರು ನಿಮ್ಮ ಮೇಲೆ ಕೆಟ್ಟ ಕಣ್ಣು ಹೊಂದಿರಬಹುದು.

ನಿಮ್ಮ ಕಾಲಿನ ಸುತ್ತಲೂ ಕಪ್ಪು ದಾರವನ್ನು ಧರಿಸುವುದು ದುಷ್ಟ ನೋಟಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ತನ್ನೊಳಗೆ ಯಾವುದೇ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಹಾನಿಕಾರಕ ಶಕ್ತಿಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ.
ಇದು ತಕ್ಷಣವೇ ನಿಮ್ಮ ದಾರಿಗೆ ಬರುವ ಯಾವುದೇ ಕೆಟ್ಟ ಶಕ್ತಿಯನ್ನು ಪ್ರತಿರೋಧಿಸುತ್ತದೆ ಮತ್ತು ನಿರ್ಮೂಲನೆ ಮಾಡುತ್ತದೆ.
ಇದು ಮಾಟಮಂತ್ರ ಪ್ರತಿಕೂಲ ಪರಿಣಾಮಗಳ ವಿರುದ್ಧವೂ ನಿಮ್ಮನ್ನು ರಕ್ಷಿಸುತ್ತದೆ.

ಕಪ್ಪು ದಾರವನ್ನು ಯಾವ ಕಾಲಿಗೆ ಕಟ್ಟಬೇಕು?
ಅಂದ ಹಾಗೆ ಕಪ್ಪು ದಾರವನ್ನು ಕಾಲಿಗೆ ಕಟ್ಟುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಿಳೆಯರು ಯಾವಾಗಲೂ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಪುರುಷರು ತಮ್ಮ ಬಲ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬೇಕು. 
ಪ್ರತಿ ವಾರ ಕಪ್ಪು ದಾರವನ್ನು ನಿಯಮಿತವಾಗಿ ಬದಲಾಯಿಸಬೇಕು.

ಪುರುಷರು ಮಂಗಳವಾರ ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಬೇಕು.
ಶನಿವಾರ ಸಂಜೆ ಕಪ್ಪು ದಾರವನ್ನು ಧರಿಸಿ 'ಗಾಯತ್ರಿ ಮಂತ್ರ' ಪಠಿಸುವುದರಿಂದ ನಿಮ್ಮ ಜಾತಕದಲ್ಲಿ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.
 

ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ 4 ಅದ್ಭುತ ಪ್ರಯೋಜನಗಳು:
ಉತ್ತಮ ಆರ್ಥಿಕ ಸ್ಥಿತಿಗಾಗಿ

ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದರೆ ಅಥವಾ ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಎದುರಿಸಿದರೆ, ನೀವು ನಿಮ್ಮ ಕಾಲಿಗೆ ಕಪ್ಪು ದಾರವನ್ನು ಧರಿಸಬಹುದು. ಇದರಿಂದ ನೀವು ನಷ್ಟದಿಂದ ಮುಕ್ತರಾಗುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ.
 

ಹೊಟ್ಟೆನೋವು ಸಮಸ್ಯೆಯನ್ನು ನಿವಾರಿಸುತ್ತದೆ
ಒಬ್ಬ ವ್ಯಕ್ತಿಯು ನಿಯಮಿತವಾಗಿ ಅನೇಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಆಗ ಆತನ ಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು. ಇದರಿಂದ ಹೊಟ್ಟೆಯ ಅಸ್ವಸ್ಥತೆಯು ನಿವಾರಣೆಯಾಗುತ್ತದೆ.

click me!