ಬೇಲೂರು ಚನ್ನಕೇಶವ ಬ್ರಹ್ಮ ರಥೋತ್ಸವ; ಕುರಾನ್ ಪಠಣ ಮಾಡದೆ ದೇವರಿಗೆ ವಂದನೆ ಸಮರ್ಪಿಸಿದ ಖಾದ್ರಿ

Published : Apr 20, 2024, 08:03 PM ISTUpdated : Apr 20, 2024, 08:12 PM IST

ವಿಶ್ವವಿಖ್ಯಾತ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ಸ್ವಾಮಿ  ದಿವ್ಯ ಬ್ರಹ್ಮ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.  

PREV
14
ಬೇಲೂರು ಚನ್ನಕೇಶವ ಬ್ರಹ್ಮ ರಥೋತ್ಸವ; ಕುರಾನ್ ಪಠಣ ಮಾಡದೆ ದೇವರಿಗೆ ವಂದನೆ ಸಮರ್ಪಿಸಿದ ಖಾದ್ರಿ

ಬೇಲೂರು ಪಟ್ಟಣದಲ್ಲಿರುವ ಶ್ರೀ ಚನ್ನಕೇಶವ ದೇವಾಲಯ   ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಮೊದಲನೇ ವರ್ಷದ ಜಾತ್ರಾ ಮಹೋತ್ಸವದ  ಕಾರ್ಯಕ್ರಮ ಕಳೆದ 9  ದಿನಗಳಿಂದಲೇ ಆರಂಭಗೊಂಡು ,ಶಾಸ್ತ್ರೀಯ ವಿಧಿ ವಿಧಾನಗಳೊಂದಿಗೆ ನಿತ್ಯ ರಾತ್ರಿ ವೇಳೆ ಪ್ರಮುಖ ಉತ್ಸವಗಳಾದ ಕಲ್ಯಾಣೋತ್ಸವ, ಚಂದ್ರ ಮಂಡಲೊತ್ಸವ, ಸೂರ್ಯ ಮಂಡಲೋತ್ಸವ,ಹಂಸ ಉತ್ಸವ,ಬೆಳ್ಳಿ ಮಂಟಪೋತ್ಸವ,     ಹನುಮಂತೋತ್ಸವ, ಗರುಡೋತ್ಸವ,ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು . ದಿವ್ಯ ಬ್ರಹ್ಮ ರಥೋತ್ಸವ ಹಿನ್ನೆಲೆ ಶುಕ್ರವಾರ ಸಂಜೆ ಯಿಂದಲೆ ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಮತ್ತು ಪ್ರವಾಸಿಗರು ನಗರದ ವಸತಿಗೃಹಗಳಲ್ಲಿ  ಮತ್ತು ದೇವಾಲಯದ ಒಳ ಮತ್ತು ಹೊರ ಭಾಗದ ಆವರಣದ ಬಳಿ ತಂಗಿದ್ದರು. 
 

24

 ಮಿಥುನ ಲಗ್ನದಲ್ಲಿ  ಶ್ರೀ ಚನ್ನಕೇಶವ ಸ್ವಾಮಿಯ ದಿವ್ಯ ಬ್ರಹ್ಮ ರಥೋತ್ಸವ ನಡೆಯಿತು. ಕಿರಣ್ ಲಗಾರಿ ಬಾರಿಸುವ ನಂತರ ಸಹಸ್ರಾರು ಸಂಖ್ಯೆಯಲ್ಲಿ ಬಂದಂತ ಭಕ್ತಾದಿಗಳು ಭಕ್ತಿ ಪೂರಕವಾಗಿ  ಮೂಲಸ್ಥಾನದಲ್ಲಿದ್ದ  ರಥವನ್ನು ದೇವಾಲಯದ ಆಗ್ನೇಯ ದಿಕ್ಕಿನ ಮೂಲೆಯ ಬಳಿ ಎಳೆದು ತರುವ ಮೂಲಕ ಅದ್ದೂರಿ ರಥೋತ್ಸವಕ್ಕೆ ಮೆರಗು ನೀಡಿದರು.
 

34

ರಥೋತ್ಸವ ಸಂದರ್ಭ ಶಾಸಕ ಎಚ್ ಕೆ ಸುರೇಶ್. ಮಾಜಿ ಸಚಿವ ಎಚ್ ಡಿ ರೇವಣ್ಣ,ಜಿಲ್ಲಾಧಿಕಾರಿ ಸತ್ಯಭಾಮ ,ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ, ತಹಸಿಲ್ದಾರ್ ಮಮತಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಜರಿದ್ದರು.
 

44

ಮೌಲ್ವಿ ಭಾಷ ಖಾದ್ರಿ ಸಾಹೇಬ್ ರಥದ ಮುಂಭಾಗ ಕುರಾನ್ ಪಠಣ ಮಾಡದೆ ದೇಗುಲದ ಒಳ ಆವರಣದಲ್ಲಿ ದೇವರಿಗೆ ವಂದನೆ ಸಮರ್ಪಿಸಿ ದೇಗುಲದವರು ನೀಡುವ ಗೌರವ ಕಾಣಿಕೆ ಪಡೆದರು.

ವರದಿ: ಹರೀಶ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಹಾಸನ

Read more Photos on
click me!

Recommended Stories