ಸಂಜೆ ತಪ್ಪಿಯೂ ಈ ಕೆಲಸ ಮಾಡಬೇಡಿ, ಇದರಿಂದ ಹಣ , ಆರೋಗ್ಯದ ನಷ್ಟ ಸಂಭವಿಸಬಹುದು!!

First Published May 28, 2021, 1:49 PM IST

ವೇದಗಳು ಎಲ್ಲ ಜ್ಞಾನ ಅಂಶಗಳ ಜೊತೆಗೆ ದೈನಂದಿನ ಜೀವನ ಮತ್ತು ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದೂ ಕೆಲಸವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಪಠ್ಯಗಳು ಜನರ ಆಹಾರ, ಜೀವನ ಪರಿಸ್ಥಿತಿಗಳು, ನಡವಳಿಕೆಯ ಅನೇಕ ಅಂಶಗಳ ಬಗ್ಗೆ ಮಾತನಾಡುತ್ತವೆ. ಅದರ ಪ್ರಕಾರ, ಸಂಜೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 

ಕೆಲವೊಂದು ಕೆಲಸ ಕಾರ್ಯಗಳನ್ನು ಸಂಜೆ ಹೊತ್ತಿಗೆ ಮಾಡಬಾರದು. ಸೂರ್ಯಾಸ್ತದ ಸಮಯದಲ್ಲಿ ಇದನ್ನು ಮಾಡಿದರೆ, ಅದು ಅವರಿಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
undefined
ಸೂರ್ಯಾಸ್ತದ ಸಮಯದಲ್ಲಿ ಎಂದಿಗೂ ಆಹಾರ ತಿನ್ನಬೇಡಿ. ಈ ಸಮಯದಲ್ಲಿ ತಿನ್ನುವ ಮೂಲಕ, ವ್ಯಕ್ತಿಯು ಮುಂದಿನ ಜೀವನದಲ್ಲಿ ಪ್ರಾಣಿಯೋನಿಯಲ್ಲಿ ಜನಿಸುತ್ತಾರೆ ಎನ್ನಲಾಗುತ್ತದೆ.
undefined
ಸಂಜೆ, ಅನಾರೋಗ್ಯ ಪೀಡಿತರು ಮತ್ತು ಮಕ್ಕಳನ್ನು ಹೊರತುಪಡಿಸಿ, ಯಾರೂ ಮಲಗಬಾರದು. ಸಂಜೆ ಮಲಗುವುದರಿಂದ ಲಕ್ಷ್ಮಿ ದೇವಿಗೆ ಕಿರಿಕಿರಿ. ಜೊತೆಗೆ ವ್ಯಕ್ತಿಯೂ ಅನಾರೋಗ್ಯದಿಂದ ಬಳಲುತ್ತಾಳೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
undefined
ಅದೇ ರೀತಿ, ಸಂಜೆ ಎಂದಿಗೂ ಸಾಲ ನೀಡಬಾರದು. ಈ ಸಮಯದಲ್ಲಿ ಹಣ ನೀಡುವ ಮೂಲಕ ಲಕ್ಷ್ಮಿ ದೇವಿಯು ಕೋಪಕ್ಕೆ ಒಳಗಾಗುತ್ತಾ ಮನೆಯಿಂದ ಹೊರಹೋಗುತ್ತಾಳೆ ಎಂದು ಹೇಳಲಾಗುತ್ತದೆ.
undefined
ಸಂಜೆ ಹೊತ್ತು ಮನೆಯ ಕಸವನ್ನು ಗುಡಿಸಿ ಹೊರಕ್ಕೆ ಹಾಕಬಾರದು. ಇದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ.
undefined
ಸಂಜೆಯ ಸಮಯವನ್ನು ಧ್ಯಾನದಲ್ಲಿ ಬಳಸಿ. ಸೂರ್ಯಾಸ್ತವು ರಾತ್ರಿಯಾಗಿರುವುದರಿಂದ ಮತ್ತು ರಾತ್ರಿ ಧ್ಯಾನದ ಸಮಯವಾಗಿದೆ. ಇದರಿಂದ ಈ ಸಮಯದಲ್ಲಿ ಧ್ಯಾನ ಮಾಡಿದರೆ ಬೇಗಭಕ್ತಿ ಭಾವ ಮೂಡಿ ಬಂದು ಮನಸ್ಸು ಹಗುರಾಗಲು ಸಹಾಯವಾಗುತ್ತದೆ.
undefined
ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು. ಯಾಕೆಂದರೆ ಈ ಸಮಯದಲ್ಲಿ ಗರ್ಭಧಾರಣೆಯಿಂದ ಹುಟ್ಟಿದ ಸಂತಾನವು ಸುಸಂಸ್ಕೃತವಾಗಿರದೆ ಕುಟುಂಬದ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡುವ ಕಾರಣದಿಂದಾಗಿ ಈ ಸಮಯದಲ್ಲಿ ಸಂಬಂಧವನ್ನು ಹೊಂದುವುದನ್ನು ತಪ್ಪಿಸಬೇಕು.
undefined
ಸೂರ್ಯಾಸ್ತದ ಸಮಯದಲ್ಲಿ ಅಧ್ಯಯನ ಮಾಡಿದರೆ ಗಮನ ಹರಿಸಲು ಅಸಾಧ್ಯ. ಸಂಜೆವೇದಗಳು ಮತ್ತು ಶಾಸ್ತ್ರಗಳನ್ನು ಅಧ್ಯಯನ ಮಾಡುವುದನ್ನು ಶಾಸ್ತ್ರಗಳು ನಿಷೇಧಿಸುತ್ತವೆ. ಈ ಸಮಯದಲ್ಲಿ ಧ್ಯಾನ ಮಾತ್ರ ಮಾಡಬೇಕು.
undefined
click me!