ಈ ಬಗ್ಗೆ ವಿಷ್ಣು ಏನು ಹೇಳಿದ್ದಾನೆ ಎಂಬುದನ್ನು ಗರುಡ ಪುರಾಣದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ, ಅದು ಹೀಗಿದೆ:
ಗರುಡ ಪುರಾಣದ ಪ್ರಕಾರ, ಇನ್ನೊಬ್ಬರ ಹಣವನ್ನು ಲೂಟಿ ಮಾಡುವ, ಮೋಸ ಮಾಡುವ ಅಥವಾ ಕದಿಯುವ ಮೂಲಕ ತಮ್ಮ ಆಸೆಗಳನ್ನು ಪೂರೈಸುವ ವ್ಯಕ್ತಿ ಮರಣದ ನಂತರ, ಯಮರಾಜನ ದೂತರು ಅವನನ್ನು ಹಗ್ಗದಿಂದ ಕಟ್ಟಿ ಹೊಡೆದು ನರಕಕ್ಕೆ ಎಳೆಯುತ್ತಾರೆ. ಅವನು ಪ್ರಜ್ಞಾಹೀನನಾಗುವವರೆಗೂ ಅವನನ್ನು ಹೊಡೆಯಲಾಗುತ್ತೆ. ಅಂತಹ ಜನರು ನರಿ, ರಣಹದ್ದು, ಹಾವು(Snake), ಕತ್ತೆ ಮತ್ತು ಕಾಗೆಗಳಾಗಿ ಜನಿಸಬಹುದು.