ಗಂಡ ಹೆಂಡತಿ ರೊಮ್ಯಾಂಟಿಕ್ ಆಗಿರಬೇಕಾ? ಬೆಳಗ್ಗೆ ಈ ಕೆಲಸ ಮಾಡಿ
ಚಾಣಾಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಬದುಕಿನ ಎಲ್ಲ ಸಂಗತಿಗಳ ಒಳಿತು ಕೆಡುಕಿನ ಬಗ್ಗೆಯೂ ಸವಿವರವಾಗಿ ಹೇಳಿದ್ದಾರೆ. ಗಂಡ ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದರೆ ಏನು ಮಾಡಬೇಕು ಅಂತಾನೂ ಹೇಳಿದ್ದು, ಇಲ್ಲಿವೆ ನೋಡಿ.
ಚಾಣಾಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಬದುಕಿನ ಎಲ್ಲ ಸಂಗತಿಗಳ ಒಳಿತು ಕೆಡುಕಿನ ಬಗ್ಗೆಯೂ ಸವಿವರವಾಗಿ ಹೇಳಿದ್ದಾರೆ. ಗಂಡ ಹೆಂಡತಿ ಸಂಬಂಧ ಚೆನ್ನಾಗಿರಬೇಕು ಅಂದರೆ ಏನು ಮಾಡಬೇಕು ಅಂತಾನೂ ಹೇಳಿದ್ದು, ಇಲ್ಲಿವೆ ನೋಡಿ.
'ನೀತಿಶಾಸ್ತ್ರ' ಬರೆದ ಮಹಾ ಮೇಧಾವಿ ಚಾಣಕ್ಯ. ವಿಷ್ಣುಗುಪ್ತ ಎಂಬುವುದು ಇವನ ಮೂಲ ಹೆಸರು. ತಕ್ಷಶಿಲೆಯ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನು. ಕುರೂಪ ದೇಹ, ಬುದ್ಧಿವಂತ ಆಚಾರ್ಯ ಚಾಣಾಕ್ಯರನ್ನು ಜನ ಭಿನ್ನವಾಗಿ ಗುರುತಿಸುವ ಹಾಗೆ ಮಾಡಿತು. ಕೆಲವರು ಆತ ಬ್ರಹ್ಮಚಾರಿ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ ಆತನಿಗೆ ಸುಶೀಲೆಯಾದ, ಸೌಂದರ್ವತಿಯಲ್ಲದ ಪತ್ನಿ ಇದ್ದಳೆಂದೂ ಹೇಳುತ್ತಾರೆ. ಹೆಂಡತಿ ಬಗ್ಗೆ ತನ್ನದೇ ನಿಲುವು ಹೊಂದಿದ್ದ ಚಾಣಕ್ಯ ಅಂಥಾ ಗುಣ ಸಂಪನ್ನೆ ಹುಡುಗಿಯನ್ನೇ ಹುಡುಕಿ ವಿವಾಹವಾದನಂತೆ. ಇಂಥ ಚಾಣಾಕ್ಯರು ಹೆಣ್ಮಕ್ಕಳ ಬಗ್ಗೆ ಸಾಕಷ್ಟು ಬಾರಿ ನೆಗೆಟಿವ್ ಮಾತುಗಳನ್ನೂ ಹೇಳಿದ್ದು ಆಧುನಿಕ ಮಹಿಳೆಗೆ ಕೊಂಚ ಇರಿಸುಮುರಿಸು ಉಂಟಾಗುವಂತಿರುತ್ತದೆ. ಇಂಥ ಚಾಣಕ್ಯ ದಾಂಪತ್ಯ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ.
ಮೈಥುನದ ಬಳಿಕ ಸ್ನಾನ ಮಾಡಬೇಕು ಎಂದಿದ್ದಾನೆ. 'ತೈಲಭಂಗೇ ಚಿತದುಮೇ ಮೈಥುನೇ ಕ್ಷೌರಕರ್ಮಣಿ । ತಾವದ್ ಭವತಿ ಚಂಡದಲ್ಲಿ ಚಚರೇತ್ ನ ಯಾವತ್ ಸ್ನಾನ' ಎನ್ನುವುದು ಚಾಣಾಕ್ಯನ ಪ್ರಸಿದ್ಧ ಶ್ಲೋಕ. ಇದರಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡೋದು ಒಳ್ಳೇದಂತೆ. ಕ್ಷೌರದ ಬಳಿಕ, ಸ್ಮಶಾನಕ್ಕೆ ಹೋಗಿ ಬಂದ ನಂತರವೂ ಸ್ನಾನ ಮಾಡಬೇಕು ಅನ್ನುವ ಅರ್ಥ ಈ ಶ್ಲೋಕಕ್ಕಿದೆ. ಇದು ವೈಜ್ಞಾನಿಕವಾಗಿಯೂ ತಳ್ಳಿಹಾಕುವ ಮಾತಲ್ಲ.
ವೈವಾಹಿಕ ಜೀವನ ಸುಖಕರವಾಗಿರಲು ಆಚಾರ್ಯ ಚಾಣಕ್ಯರು ಹಲವು ಸಲಹೆ ನೀಡಿದ್ದಾರೆ. ಇವರು ನೀಡಿದ ಕೆಲವು ಸೂಚನೆಗಳನ್ನು ಪಾಲಿಸಿದರೆ ದಂಪತಿಯಲ್ಲಿ ಸಾಮರಸ್ಯ ಮೂಡುತ್ತದೆ. ಜೀವನ ಸುಖವಾಗಿರುತ್ತದೆ. ಧನಾತ್ಮಕ ಶಕ್ತಿ (Positive Energy) ನಮ್ಮನ್ನು ಸುತ್ತುವರೆದಿದ್ದು, ಜೀವನವು ಸಂತೋಷವಾಗಿರುತ್ತದೆ. ನಮ್ಮ ವೈವಾಹಿಕ ಜೀವನವು ಪ್ರತಿದಿನ, ಪ್ರತಿ ಕ್ಷಣ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಬೇಕು.
ಹೆಣ್ಣುಮಕ್ಕಳು ಬೆಳಿಗ್ಗೆ ಬೇಗನೆ ಎದ್ದು ಗಂಡನ ಕೆಲಸಗಳಿಗೆ ಕೈ ಜೋಡಿಸಬೇಕು. ಆಗ ಅವರ ಸಂಬಂಧ ತುಂಬಾ ಗಟ್ಟಿಯಾಗುತ್ತದೆ. ಜೀವನದಲ್ಲಿ ಸಮೃದ್ಧಿ (Prosperity) ಮತ್ತು ಅದೃಷ್ಟ (Luck) ತುಂಬಿರುತ್ತದೆ.
ಗಂಡ-ಹೆಂಡತಿ ಒಟ್ಟಿಗೇ ಯೋಗ ಮಾಡಿದರೆ ಇಬ್ಬರೂ ಆರೋಗ್ಯವಾಗಿರುತ್ತಾರೆ. ದೇಹ ಮತ್ತು ಆರೋಗ್ಯ ಎಂದೆಂದಿಗೂ ಉತ್ತಮವಾಗಿರುತ್ತದೆ. ಮನಸ್ಸೂ ಶಾಂತವಾಗಿರುತ್ತದೆ. ಇದು ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದ ದಂಪತಿ ನಡುವೆ ಜಗಳ ಕಡಿಮೆಯಾಗುತ್ತದೆ. ಅಲ್ಲದೇ ದಿನವನ್ನು ಉತ್ತಮವಾಗಿರಿಸುತ್ತದೆ. ಮಾನಸಿಕವಾಗಿಯೂ ಸದೃಢರಾಗಿರಬಹುದು.
ದಿನವನ್ನು ಗಂಡ-ಹೆಂಡತಿ ಪ್ರೀತಿಯಿಂದ ಆರಂಭಿಸಿದರೆ ದಿನ ಪೂರ್ತಿ ಲವಲವಿಕೆಯಿಂದ ಇರುತ್ತದೆ. ದಿನವಿಡೀ ಚೈತನ್ಯ ತುಂಬಿರುತ್ತದೆ. ಹೆಚ್ಚಿನ ಶಕ್ತಿಯಿಂದ ಎಲ್ಲವನ್ನೂ ಮಾಡಬಹುದು. ಬೆಳಗ್ಗೆ ಗಂಡ ಹೆಂಡತಿ ಹೇಗಿರುತ್ತಾರೆ ಎಂಬುದರ ಮೇಲೆ ಇಡೀ ದಿನದ ಪರಿಣಾಮ ಅವಲಂಬಿಸಿರುತ್ತದೆ. ಇದು ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸ ಹೆಚ್ಚಿಸುತ್ತದೆ.
ಪೂಜೆ ಮಾಡುವ ಮೂಲಕ ದಿನ ಆರಂಭಿಸಿದರೆ ಅದೃಷ್ಟ ಖುಲಾಯಿಸುತ್ತದೆ. ಆ ಮೂಲಕ ದೇಹದಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಹಾಗಾಗಿ ಪತಿ ಪತ್ನಿಯರು ಮುಂಜಾನೆಯೇ ದೇವರ ಪೂಜಿಸಿದರೆ ಅದೃಷ್ಟ ತರೋದು ಗ್ಯಾರಂಟಿ ಎನ್ನುತ್ತಾನೆ ಚಾಣಾಕ್ಯ.