ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

First Published May 24, 2019, 11:15 AM IST

ಪ್ರತಿ ಲೋಕಸಭೆ ಚುನಾವಣೆಯಲ್ಲೂ ಒಂದೇ ಕುಟುಂಬದ ಹಲವು ಮಂದಿ ಸ್ಪರ್ಧಿಸುವುದು ಸರ್ವೇ ಸಾಮಾನ್ಯ. ಅದು ಈ ಬಾರಿಯೂ ಮುಂದುವರಿದಿದೆ. ಅಂತಹ ಕುಟುಂಬಗಳ ಸೋಲು- ಗೆಲುವಿನ ಕಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಗಾಂಧಿ ಪರಿವಾರದ ಇಬ್ಬರಿಗೂ ಗೆಲುವು: ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನೆಹರು- ಗಾಂಧಿ ಕುಟುಂಬದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ, ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಜಯಭೇರಿಯಾಗಿದ್ದಾರೆ. ಆದರೆ, ಅಮೇಠಿಯಲ್ಲಿ ಸೋತಿದ್ದಾರೆ.
undefined
ಮನೇಕಾ, ಪುತ್ರ ಜಯಭೇರಿ: ಬಿಜೆಪಿಯಿಂದ ಸ್ಪರ್ಧಿಸಿದ್ದ ನೆಹರು- ಗಾಂಧಿ ಕುಟುಂಬದವರೇ ಆದ ಮನೇಕಾ ಗಾಂಧಿ ಮತ್ತು ಅವರ ಮಗ ವರುಣ್ ಗಾಂಧಿ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರದಿಂದ ಮನೇಕಾ ಗಾಂಧಿ, ಪೀಲಿಭೀತ್‌ನಿಂದ ವರುಣ್ ಗಾಂಧಿ ಸ್ಪರ್ಧಿಸಿದ್ದರು.
undefined
ಜೆಡಿಎಸ್‌ನ ಗೌಡ್ರು ಕುಟುಂಬಕ್ಕೆ ಆಘಾತ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದಿಂದ ಮೂವರು ಸ್ಪರ್ಧಿಸಿದ್ದರು. ಅದರಲ್ಲಿ ಹಾಸನ ಕ್ಷೇತ್ರದಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಮಾತ್ರ ಗೆಲುವು ಸಾಧಿಸಿದ್ದಾರೆ. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡ ಮತ್ತು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುಂಡಿದ್ದಾರೆ.
undefined
ಮುಲಾಯಂ ಕುಟುಂಬಕ್ಕೆ ಮಿಶ್ರ ಫಲ: ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಕುಟುಂಬದಿಂದ ಒಟ್ಟು ಐವರು ಸ್ಪರ್ಧಿಸಿದ್ದರು. ಅದರಲ್ಲಿ ಮೇನ್‌ಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್, ಆಜಂಗಢದಲ್ಲಿ ಮಗ ಅಖಿಲೇಶ್ ಯಾದವ್ ಮತ್ತು ಫಿರೋಜಾಬಾದ್ ಕ್ಷೇತ್ರದಿಂದ ಸಂಬಂಧಿ ಅಕ್ಷಯ್ ಯಾಧವ್ ಗೆಲುವು ಸಾಧಿಸಿದ್ದಾರೆ. ಆದರೆ, ಕನ್ನೌಜ್ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಸೊಸೆ ಡಿಂಪಲ್ ಯಾದವ್, ಪಿಎಸ್‌ಪಿ ಪಕ್ಷದಿಂದ ಫಿರೋಜಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಹೋದರ ಶಿವಪಾಲ್ ಯಾದವ್ ಸೋತಿದ್ದಾರೆ.
undefined
ಶತ್ರುಘ್ನ ಸಿನ್ಹ ದಂಪತಿಗೆ ಸೋಲು: ಸ್ಟಾರ್ ದಂಪತಿಗಳಾದ ಶತ್ರುಘ್ನ ಸಿನ್ಹ ಮತ್ತು ಅವರ ಪತ್ನಿ ಪೂನಮ್ ಸಿನ್ಹ ಇಬ್ಬರೂ ಸೋಲುಂಡಿದ್ದಾರೆ. ಬಿಹಾರದ ಪಟನಾ ಸಾಹೀಬ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹ ಮತ್ತು ಉತ್ತರ ಪ್ರದೇಶದ ಲಖನೌನಿಂದ ಎಸ್‌ಪಿ ಅಭ್ಯರ್ಥಿಯಾಗಿ ಪೂನಮ್ ಸಿನ್ಹ ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
undefined
ಕರುಣಾನಿಧಿ ಕುಟುಂಬಕ್ಕೆ ಸಿಹಿ: ಡಿಎಂಕೆ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಕುಟುಂಬದಿಂದ ಸ್ಪರ್ಧಿಸಿದ್ದ ಇಬ್ಬರು ಗೆಲುವು ಕಂಡಿದ್ದಾರೆ. ಕರುಣಾನಿಧಿ ಪುತ್ರಿ ಕನಿಮೋಳಿ ತೂತುಕುಡಿ ಮತ್ತು ಸಂಬಂಧಿ ದಯಾನಿಧಿ ಮಾರನ್ ಚೆನ್ನೈ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ.
undefined
ಶರದ್ ಪವಾರ್ ಕುಟುಂಬಕ್ಕೆ ಕಹಿ: ಮಾಜಿ ಸಿಎಂ ಶರದ್ ಪವರ್ ಕುಟುಂಬದಿಂದ ಇಬ್ಬರು ಎನ್‌ಸಿಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಇಬ್ಬರೂ ಸೋಲುಂಡಿದ್ದಾರೆ. ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶರದ್ ಪವರ್ ಪುತ್ರಿ ಸುಪ್ರಿಯಾ ಸುಳೆ ಗೆದ್ದಿದ್ದಾರೆ, ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಸೋತಿದ್ದಾರೆ.
undefined
ಪಾಸ್ವಾನ್ ಪುತ್ರ, ಇಬ್ಬರು ತಮ್ಮಂದಿರಗೆ ಗೆಲುವು: ಎಲ್‌ಜೆಪಿಯಿಂದ ಸ್ಪರ್ಧಿಸಿದ್ದ ರಾಮ್‌ವಿಲಾಸ್ ಪಾಸ್ವಾನ್ ಪುತ್ರ ಮತ್ತು ತಮ್ಮಂದಿರಿಬ್ಬರು ಗೆಲುವು ಪಡೆದಿದ್ದಾರೆ. ಬಿಹಾರದ ಜಮುಯಿ ಕ್ಷೇತ್ರದಿಂದ ಪುತ್ರ ಚಿರಾಗ್ ಪಾಸ್ವಾನ್, ಹಾಜಿಪುರದಲ್ಲಿ ಪಶು ಪತಿಕುಮಾರ್ ಪಾರಸ್, ಸಮಷ್ಟಿಪುರದಲ್ಲಿ ರಾಮಚಂದ್ರ ಪಾಸ್ವಾನ್ ಗೆದ್ದಿದ್ದಾರೆ.
undefined
ಆಂಧ್ರದಲ್ಲಿ ಅಪ್ಪ, ಮಗಳಿಗೆ ಸೋಲು: ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದ ಅಪ್ಪ, ಮಗಳು ಸೋತಿದ್ದಾರೆ. ಆಂಧ್ರದ ಅರಕು ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿ ಕಿಶೋರ್ ಚಂದ್ರದೇವ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರುತಿ ದೇವಿ ಸ್ಪರ್ಧಿಸಿ ಸೋತಿದ್ದಾರೆ.
undefined
ಪಂಜಾಬ್‌ನಲ್ಲಿ ಬಾದಲ್ ದಂಪತಿಗೆ ಗೆಲುವು: ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದಿಂದ ಸ್ಪರ್ಧಿಸಿದ್ದ ಪತಿ, ಪತ್ನಿ ಗೆಲುವು ಸಾಧಿಸಿದ್ದಾರೆ. ಫಿರೋಜ್‌ಪುರ ಕ್ಷೇತ್ರದಲ್ಲಿ ಸುಖಬೀರ್ ಸಿಂಗ್ ಬಾದಲ್, ಬಟಿಂಡಾ ಕ್ಷೇತ್ರದಲ್ಲಿ ಪತ್ನಿ ಹರ್‌ಸಿಮ್ರತ್ ಕೌರ್ ಗೆದಿದ್ದಾರೆ.
undefined
ಮಾಧವ್‌ರಾವ್ ಸಿಂಧಿಯಾ ಪುತ್ರಗೆ ಸೋಲು: ಕೇಂದ್ರದ ಮಾಜಿ ಸಚಿವರಾದ ಮಾಧವ್‌ರಾವ್ ಸಿಂಧಿಯಾ ಅವರ ಪುತ್ರ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ.ಕೆ. ಪಿ ಯಾದವ್ ಅವರ ಎದುರು ಸಿಂಧಿಯಾ ಅವರು ಸುಮಾರು 1,0000 ಮತಗಳ ಅಂತರದಿಂದ ಸೋಲುಂಡಿದ್ದಾರೆ.
undefined
ಮುರಳಿ ಡಿಯೋರಾ ಪುತ್ರಗೂ ಸೋಲು: ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ಸಿಗರಾದ ಮುರುಳಿ ಡಿಯೋರಾ ಅವರ ಪುತ್ರ ಮಿಲಿಂದ್ ಡಿಯೋರಾ ಅವರು ಶಿವಸೇನೆಯ ಅರವಿಂದ್ ಗಣಪತ್ ಸಾವಂತ್ ಎದುರು ಪರಾಜಿತಗೊಂಡಿದ್ದಾರೆ
undefined
ಕರ್ನಾಟಕ ಸಿಎಂ ಎಚ್‌ಡಿಕೆ ಪುತ್ರ ಸೋಲು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಎದುರು ಹೀನಾಯ ಸೋಲು ಕಂಡಿದ್ದಾರೆ.
undefined
ಜೆಎಂಎಂನಲ್ಲಿ ಅಪ್ಪ, ಮಗಳ ಸೋಲು: ಜೆಎಂಎಂ ಪಕ್ಷದಿಂದ ಸ್ಪರ್ಧಿಸಿದ್ದ ಶಿಬು ಸೊರೇನ್ ಮತ್ತು ಮಗಳು ಅಂಜಲಿ ಸೊರೇನ್ ಸೋತಿದ್ದಾರೆ.
undefined
click me!