ಕ್ಯಾಮರಾ ಕ್ಲಿಕ್ಸ್: ಮಂಡ್ಯ ಪ್ರಚಾರದಲ್ಲಿ ನಿಖಿಲ್ ವಿವಿಧ ರೂಪಗಳು!
First Published Apr 8, 2019, 5:17 PM ISTಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದ ಮಂಡ್ಯ ಕ್ಷೇತ್ರ ಭಾರೀ ಕುತೂಹಲ ಮುಡಿಸಿದೆ. ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಅಖಾಡಕ್ಕಿಳಿದಿರುವುದರಿಂದ ಸಿಎಂ ಕುಮಾರಸ್ವಾಮಿಗೆ ತಮ್ಮ ಪುತ್ರ ನಿಖಿಲ್ ಗೆ ಗೆಲುವು ತಂದು ಕೊಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಒಂದೆಡೆ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್ಸ್ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ. ಇತ್ತ ಕುಮಾರಸ್ವಾಮಿ ಮಗನ ಪರ ಪ್ರಚಾರಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ನಿಖಿಲ್ ಕೂಡಾ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದು ಇದಕ್ಕಾಗಿ ವಿವಿಧ ರೂಪಗಳನ್ನೂ ಧರಿಸಿದ್ದಾರೆ. ಪ್ರಚಾರದ ವೇಳೆ ಎತ್ತಿನ ಗಾಡಿ ನಡೆಸುವುದು, ಭತ್ತ ನಾಟಿ ಹೀಗೆ ಹಲವಾರು ಕಸರತ್ತು ನಡೆಸಿದ್ದಾರೆ. ಇಂತಹ ಕೆಲ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.