ವರ್ಷದಿಂದ ಕೋಮಾದಲ್ಲಿರುವ ಶಿಕ್ಷಕ: ಕುಟುಂಬಕ್ಕೆ ನೆರವಾದ ಸಚಿವ ಸುರೇಶ್ ಕುಮಾರ್

First Published Dec 14, 2020, 8:33 PM IST

ನಂಜನಗೂಡಿನಲ್ಲಿ ಇಂದು (ಸೋಮವಾರ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಹಾದೇವಸ್ವಾಮಿ ಎನ್ನುವರ ಮನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್  ಅವರು ಭೇಟಿ ನೀಡಿದರು. ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿಯೇ ಇರುವ ಶಿಕ್ಷಕರನ್ನ ಆರೋಗ್ಯ ವಿಚಾರಿಸಿದರು. ಅಲ್ಲದೇ ಅವರಿಗೆ ಸಹಾಯ ಮಾಡಲು  ಏನು ಕ್ರಮ ಕೈ ಗೊಳ್ಳಬಹುದು ಎಂದು ವಿವರಿಸಿದರು.

ಕಳೆದೊಂದು ವರ್ಷದಿಂದ ಕೋಮಾ ಸ್ಥಿತಿಯಲ್ಲಿರುವ ನಂಜನಗೂಡಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಮಹಾದೇವಸ್ವಾಮಿ ಮನೆಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.
undefined
ಮಹದೇವಸ್ವಾಮಿ 2019 ಡಿಸೆಂಬರ್ 23ರಂದು ಅಪಘಾತದಲ್ಲಿ ಸಿಲುಕಿ ಅಂದಿನಿಂದ ಇದುವರೆಗೂ ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ.
undefined
ಇದೀಗ ಸಚಿವ ಸುರೇಶ್ ಕುಮಾರ್ ಅವರು ಮಹದೇವಸ್ವಾಮಿ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಸಹಾಯ ಮಾಡಲು ಏನು ಕ್ರಮ ಕೈಗೊಳ್ಳಬಹುದು ಎಂದು ವಿವರಿಸಿದ್ದಾರೆ.
undefined
ಅವರ ಕುಟುಂಬದವರೊಂದಿಗೆ ಮಾತನಾಡಿ ಈ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡಲು ಏನು ಕ್ರಮ ಕೈ ಗೊಳ್ಳಬಹುದು ಎಂದು ವಿವರಿಸಿದ್ದೇನೆ ಎಂದರು.
undefined
ವಿಶೇಷ ಪ್ರಕರಣವೆಂದು ಬಗೆದು ಅವರ ಧರ್ಮಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
undefined
ಅವರ ಪರಿಸ್ಥಿತಿ ಯಾರಿಗಾದರೂ ಕಣ್ಣಲ್ಲಿ ನೀರು ತರಿಸುತ್ತದೆ ಎಂದು ಸುರೇಶ್ ಕುಮಾರ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
undefined
click me!