ಕರ್ನಾಟಕದಲ್ಲಿ ಸಾಮಾಜಿಕ ಸುಧಾರಣೆ ಚಳವಳಿಗೆ ದೊಡ್ಡ ಇತಿಹಾಸವಿದೆ. ಹಳೆಯ ಸಾಮಾಜಿಕ ಹಾಗೂ ಈಗಿನ ಸಾಂವಿಧಾನಿಕ ಸುಧಾರಣೆಗಳನ್ನು ಆಧರಿಸಿ ಕಾನೂನು ಮತ್ತು ಮಾನವೀಯತೆಗಳ ಹದವಾದ ಮಿಶ್ರಣ ಹೊಂದಿದ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಂಗದಲ್ಲಿ ಸುಧಾರಣೆಗಳನ್ನು ತರುವ ಕಾರ್ಯಗಳು ಈ ಅಧ್ಯಯನ ಪೀಠದ ಮೂಲಕ ಆಗಲಿ,ವಿಜ್ಞಾನೇಶ್ವರರ ಮಿತಾಕ್ಷರ ಸಂಹಿತೆ ಈ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಇಂದಿನ ಕಾಲ,ಸಂದರ್ಭಕ್ಕೆ ಅನುಗುಣವಾಗಿ ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕು. ವಿದ್ಯೆ , ಜ್ಞಾನ, ಧ್ಯಾನಗಳನ್ನು ಬೆಸೆದ ಸುಧಾರಾಣಾತ್ಮಕ ಕಾರ್ಯಗಳಾಗಬೇಕು. ಸುಧಾರಣೆ ಸಾಮಾಜಿಕ ಮಾತ್ರವಲ್ಲ ವೈಯಕ್ತಿಕ ಸುಧಾರಣೆಗಳೂ ಕೂಡ ಮುಖ್ಯ ಎಂದು ತಿಳಿಸಿದ ಸಿಎಂ ಬೊಮ್ಮಾಯಿ