ಗಡೀಪಾರು ಕ್ರಮ ಎದುರಿಸುತ್ತಿರುವ ಪ್ರಮುಖ ಹಿಂದೂ ಮುಖಂಡರಲ್ಲಿ ಅರುಣ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ, ಭರತ್ ಕುಮ್ಡೇಲು, ಲತೇಶ್ ಗುಂಡ್ಯ, ಚರಣ್, ಪವನ್ ಕುಮಾರ್ ಮೊದಲಾದವರಿದ್ದಾರೆ. ಮುಸ್ಲಿಂ ಸಂಘಟನೆಗಳ ಮುಖಂಡರಲ್ಲಿ ಹಕೀಂ ಕೂರ್ನಡ್ಕ, ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಮೊಯಿದ್ದೀನ್ ಅದ್ನಾನ್, ಮಹಮ್ಮದ್ ಅಶ್ರಫ್, ಅಜೀಜ್, ಶಮೀರ್, ಮೊದಲಾದವರಿದ್ದಾರೆ. ಪ್ರದೇಶವಾರು ಗಡೀಪಾರು ಪ್ರಸ್ತಾವನೆ ಪಡೆದವರವರಲ್ಲಿ ಉಪ್ಪಿನಂಗಡಿ – 6, ಬೆಳ್ಳಾರೆ – 2, ಸುಳ್ಯ – 2, ಕಡಬ – 1, ಪುತ್ತೂರು ಗ್ರಾಮಾಂತರ – 3, ಪುತ್ತೂರು ನಗರ – 6, ಬೆಳ್ತಂಗಡಿ – 2, ಪುಂಜಾಲಕಟ್ಟೆ – 1, ಬಂಟ್ವಾಳ ನಗರ – 4, ಬಂಟ್ವಾಳ ಗ್ರಾಮಾಂತರ – 6, ವಿಟ್ಲ – 3 ಜನರಿದ್ದಾರೆ.