ಮಂಗಳೂರು: ಡಿಸಿಪಿ ಕಾರಿನ ಮೇಲೆಯೇ ಲಾರಿ ಹತ್ತಿಸಲು ಮರಳು ಕಳ್ಳರ ಯತ್ನ..!

First Published Oct 21, 2021, 12:05 PM IST

ಮಂಗಳೂರು(ಅ.21): ಮಂಗಳೂರು(ಅ.21): ಅಕ್ರಮ ಮರಳುಗಾರಿಕೆ ತಪಾಸಣೆ ವೇಳೆ ದಂಧೆಕೋರರು ಡಿಸಿಪಿ  ಹರಿರಾಂ ಶಂಕರ್ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ. ಈ ಸಂಬಂಧ ಇಬ್ಬರನ್ನು ಟಿಪ್ಪರ್‌ ಚಾಲಕ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಅಕ್ರಮ ಮರಳುಗಾರಿಕೆ ಕುರಿತ ಮಾಹಿತಿ ಮೇರೆಗೆ ಬುಧವಾರ ನಸುಕಿನ ಜಾವ ಅಡ್ಯಾರ್‌ ಸಮೀಪದ ಕಾಲೇಜು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು. 

2.30ರ ಸುಮಾರಿಗೆ ಅಡ್ಯಾರ್‌ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-73 ಕಡೆಗೆ ಟಿಪ್ಪರ್‌ ಲಾರಿಯೊಂದು ಬರುತ್ತಿತ್ತು. ಈ ವೇಳೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದ ಪೊಲೀಸರು.

ಈ ವೇಳೆಗೆ ಟಿಪ್ಪರ್‌ ಲಾರಿಯ ಹಿಂದಿನಿಂದ ಮುಂದೆ ಬಂದ ಆಲ್ಟೋ ಕಾರೊಂದರಲ್ಲಿ ಬಂದು ಲಾರಿ ನಿಲ್ಲಿಸದಂತೆ ಚಾಲಕನಿಗೆ ಸೂಚಿಸಿದ ದುಷ್ಕರ್ಮಿಗಳು. ಈ ವೇಳೆ ಪೊಲೀಸರು ತಡೆಯಲು ಬಂದಾಗ ಅವರ ಮೇಲೆಯೇ ವಾಹನ ಹತ್ತಿಸುವ ರೀತಿಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಪರಾರಿಯಾದ ಖದೀಮರು.

ಈ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರ ಸಹಕಾರದೊಂದಿಗೆ ಟಿಪ್ಪರ್‌ ಲಾರಿ ಚಾಲಕ ಅಬ್ದುಲ್‌ ಇಸಾಕ್‌, ಆಲ್ಟೋ ಕಾರು ಚಾಲಕ ಮೊಯಿದ್ದೀನ್‌ ಅಪ್ಸರ್‌ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

click me!