ಮನೆಗೆ ಬಂದ ಶಿಕ್ಷಕಿಯ ಕೊಂದು, ಶವದ ಜೊತೆ ಸೆಕ್ಸ್ ನಡೆಸಿದ ಕಾಮುಕ!

First Published Apr 18, 2021, 2:37 PM IST

ವಾರದ ಹಿಂದೆ ಏಪ್ರಿಲ್ 11ರಂದು ಐಆರ್ಖಂಡ್‌ನ ಜಮ್ಶೇಡ್‌ಪುರದಲ್ಲಿ ಪತ್ನಿ, ಇಬ್ಬರು ಮಕ್ಕಳು ಸೇರಿ ಓರ್ವ ಶಿಕ್ಷಕಿಯನ್ನು ಹತ್ಯೆಗೈದ ಆರೋಪಿ ದೀಪಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ಅನೇಕ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ. ಈ ವ್ಯಕ್ತಿ ಮನಸ್ಥಿತಿ ಅದೆಷ್ಟರ ಮಟ್ಟಿಗೆ ಕೆಟ್ಟಿತ್ತೆಂದರೆ ಆತ ಶಿಕ್ಷಕಿಯನ್ನು ಕೊಂದ ಬಳಿಕ ಅವರ ಶವದ ಜೊತೆಗೇ ಸೆಕ್ಸ್ ನಡೆಸಿದ್ದ. ಈ ಸೈಕೋ ಕಿಲ್ಲರ್‌ ಪ್ರತೀ ದಿನ ತನ್ನ ಮೊಬೈಲ್‌ನಲ್ಲಿ ವೆಬ್‌ ಸೀರೀಸ್‌ಗಳನ್ನು ನೋಡಿಕೊಂಡಿರುತ್ತಿದ್ದನೆಂಬ ಮಾಹಿತಿಯೂ ಬಯಲಾಗಿದೆ.

ಈ ಬಗ್ಗೆ ಬಾಯ್ಬಿಟ್ಟಿರುವ ಆರೋಪಿ ದೀಪಕ್ ನಾನು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಇಚ್ಛಿಸಿರಲಿಲ್ಲ. ಬೇರೆ ಯಾವ ದಾರಿ ಇಲ್ಲದೇ ಹೀಗೆ ಮಾಡಿದೆ. ನಾನು ಕೇವಲ ನನ್ನ ಗೆಳೆಯರನ್ನು ಕೊಲ್ಲಲು ಪ್ಲಾನ್ ಮಾಡಿದ್ದೆ. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ನಾನು ಜೈಲಿಗೆ ಹೋದರೆ ನನ್ನ ಕುಟುಂಬದ ಗತಿ ಏನು? ಎಂದು ಯೋಚಿಸಿ ಅವರನ್ನು ಮೊದಲು ಕೊಂದೆ. ಬಳಿಕ ಗೆಳೆಯ ರೋಶನ್‌ನನ್ನು ಕೊಲ್ಲಲು ನಿರ್ಧರಿಸಿದ್ದೆ, ಆದರೆ ಆತ ಬದುಕುಳಿದ ಎಂದಿದ್ದಾರೆ. ಗೆಳೆಯರು ನನಗೆ ಮೋಸ ಮಾಡಿದ್ದರು. ನಾವೆಲ್ಲರೂ ಸೇರಿ ಹಣ ಹಾಕಿ ಲಾರಿಯೊಂದನ್ನು ಖರೀದಿಸಿದ್ದೆವು. ಆದರೆ ನಷ್ಟ ಎದುರಾಯ್ತು. ಹೀಗಿರುವಾಗ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದಿದ್ದಾನೆ.
undefined
ಇನ್ನು ಕುಟುಂಬ ಸದಸ್ಯರನ್ನು ಕೊಂದಾಗ ಟೀಚರ್ ಟ್ಯೂಷನ್‌ಗೆಂದು ಬಂದಿದ್ದರು. ಹೀಗಾಗಿ ಅವರನ್ನೂ ಕೊಲ್ಲಬೇಕಾಯ್ತು. ಬಳಿಕ ಅವರ ಕೈ ಕಾಲುಗಳನ್ನು ಟೇಪ್‌ ಮೂಲಕ ಕಟ್ಟಿ ಹಾಕಿದ ಆರೋಪಿ, ಶವದೊಂದಿಗೆ ಸೆಕ್ಸ್ ನಡೆಸಿದ್ದಾನೆ. ಆದರೆ ಅಷ್ಟರಲ್ಲಿ ಆರೋಪಿಯ ಗೆಳೆಯ ರೋಶನ್ ಹಾಗೂ ಮೈದುನ ಅಅಲ್ಲಿಗೆ ತಲುಪಿದ್ದಾರೆ. ಭಯ ಬಿದ್ದ ದೀಪಕ್ ಅವರ ಮೇಲೂ ದಾಳಿ ನಡೆಸಿದ್ದಾನೆ. ಆದರೆ ಅದೃಷ್ಟವಶಾತ್ ಇಬ್ಬರೂ ಅಲ್ಲಿಂದ ಪಾರಾಗಿ ಓಡಿದ್ದಾರೆ.
undefined
ಇಷ್ಟೆಲ್ಲಾ ನಡೆದ ಬಳಿಕ ದೀಪಕ್‌ ತನ್ನ ಬುಲೆಟ್‌ ಏರಿ ಒಡಿಶಾದ ರಾವುರ್‌ಕೆರಾಗೆ ತೆರಳಿದ್ದಾನೆ. ಹೋಟೆಲ್‌ಗಳಲ್ಲಿ ದಿನಗಳೆಯುತ್ತಿದ್ದ ಈತ, ಮನೆಯಿಂದ ತಂದಿದ್ದ ಚಿನ್ನ ಮಾರಿದ್ದ. ಇದರಲ್ಲಿ ನಾಲ್ಕು ಲಕ್ಷ ಸಿಕ್ಕಿತ್ತು. ಆದರೆ ಅತ್ತ ಪೊಲೀಸರು ಲೊಕೆಷನ್ ಟ್ರೇಸ್ ಮಾಡುತ್ತಿದ್ದರು. ಹೀಗಿದ್ದರೂ ದೀಪಕ್ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ.
undefined
ಈ ನಡುವೆ ದೀಪಕ್ ತಾನು ಚಿನ್ನ ಮಾರಿ ಪಡೆದಿದ್ದ ಹಣವನ್ನು ತನ್ನ ಸಹೋದರನ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲು ಬ್ಯಾಂಕ್‌ಗೆ ತೆರಳಿದ್ದ. ಆದರೆ ಪೊಲೀಸರು ತಮ್ಮ ಮೂಲಗಳಿಂದ ಸಿಕ್ಕ ಮಾಹಿತಿ ಮೇರೆಗೆ ಬ್ಯಾಂಕ್‌ಗೆ ತೆರಳಿ ದೀಪಕ್‌ನನ್ನು ಬಂಧಿಸಿದ್ದಾರೆ.
undefined
ಇನ್ನು ಇಂತಹ ಕ್ರೌರ್ಯವೆಸಗಿದ ದೀಪಕ್ ಟಾಟಾ ಸ್ಟೀಲ್ ಫೈಯರ್‌ ಬ್ರಿಗೇಡ್‌ನ ಉದ್ಯೋಗಿಯಾಗಿದ್ದಾನೆ. ತನ್ನ ಗೆಳೆಯರನ್ನು ಸಾಯಿಸುವ ದುರುದ್ದೇಶದಿಂದ ತನ್ನದೇ ಸುಂದರ ಕುಟುಂಬವನ್ನು ಈತ ನಾಶಪಡಿಸಿದ್ದಾನೆ. ತಂದೆಯೊಬ್ಬ ಅದೆಷ್ಟು ಕಲ್ಲು ಮನಸ್ಸಿನವನಾದನೆಂದರೆ, ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ನಿರ್ದಯಿಯಾಘಿ ಕೊಂದಿದ್ದ. ಸದ್ಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
undefined
click me!