ಪ್ರೇಯಸಿಯ ಮದುವೆ ತಡೆಯಲು ಗೆಳೆಯನೊಂದಿಗೆ ಹೋದ, 5 ದಿನದ ಬಳಿಕ ಇಬ್ಬರ ಶವ ಪತ್ತೆ!
First Published Aug 31, 2020, 2:07 PM ISTಪ್ರೇಯಸಿಯ ಮದುವೆ ತಡೆಯಲು ಹೊರಟಿದ್ದ ಪ್ರೇಮಿ ಹಾಗೂ ಆತನ ಗೆಳೆಯನನ್ನು ಹತ್ಯೆಗೈಯ್ಯಲಾಗಿದೆ. ಇಬ್ಬರ ಶವ ಐದು ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾಗಿದೆ. ಚಂದ್ರಭಾಗ ನದಿ ತಟದಲ್ಲಿರುವ ಕಾಡಿನಲ್ಲಿ ಇಬ್ಬರು ಯುವಕ ಮೃತದೇಹ ಸಿಕ್ಕಿದೆ. ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಇದೆ ಪೊಲೀಸರು ಮೃತದೇಹ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತರನ್ನು ಡಂಡಾರಿಯ ನಿವಾಸಿ ರಾಜೀವ್ ಸದಾ ಹಾಗೂ ಭಗ್ವಾನ್ ಸದಾ ಎಂದು ಗುರುತಿಸಲಾಗಿದೆ.