ಗೋವಿಂದರಾಜನಗರ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಅಂಶ ಪತ್ತೆಯಾಗಿದೆ. ಆರೋಪಿಗಳು ಟಿಕೆಟ್ ಮಾರಾಟ ಮಾಡಲು ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿದ್ರು. ಕಳ್ಳ ವ್ಯವಹಾರದ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಮತ್ತಷ್ಟು ಮಾಹಿತಿ ಪತ್ತೆಯಾಗಿದೆ. ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡೋ ಮಾರ್ಗ ಹಿಡಿದಿದ್ದರು.
ಸದ್ಯ ಇಲಾಖೆ ಮರ್ಯಾದೆ ತೆಗೆದ ಇಬ್ಬರು ಕಾನ್ಸ್ ಟೇಬಲ್ ಅಮಾನತ್ತಿಗೆ ಪಶ್ಚಿಮ ವಿಭಾಗ ಡಿಸಿಪಿ ಶಿಫಾರಸ್ಸು ಮಾಡಿದ್ದಾರೆ. ಇದರ ಹಿಂದೆ ಹಿರಿಯ ಅಧಿಕಾರಿಗಳು ಭಾಗಿಯಾಗಿರೋ ಶಂಕೆ ಕೂಡ ಇದ್ದು ,ತನಿಖೆ ಮುಂದುವರೆದಿದೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.