Published : Oct 30, 2023, 05:38 PM ISTUpdated : Oct 30, 2023, 05:48 PM IST
ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಮೋಘ ಪ್ರದರ್ಶನ ತೋರುವ ಮೂಲಕ ಈಗಾಗಲೇ ಸೆಮೀಸ್ಗೆ ಒಂದು ಕಾಲು ಇಟ್ಟಾಗಿದೆ. ಅದರಲ್ಲೂ ಕಳೆದೆರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮೂಲಕ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದ್ದಾರೆ. ಇದೀಗ ಶಮಿ, ಈ ಹಿಂದೆ ಮಾಧ್ಯಮವೊಂದರಲ್ಲಿ ಶಮಿ ಆಡಿದ ಒಂದು ಮಾತು ಇದೀಗ ಮತ್ತೊಮ್ಮೆ ವೈರಲ್ ಆಗಲಾರಂಭಿಸಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ತಾನಾಡಿದ ಮೊದಲ 6 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬಹುತೇಕ ಸೆಮೀಸ್ ಹೊಸ್ತಿಲಿಗೆ ಬಂದು ನಿಂತಿದೆ.
210
ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಟೀಂ ಇಂಡಿಯಾ, ತವರಿನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶತಾಯಗತಾಯ ಕಪ್ ಗೆಲ್ಲುವ ಹುರುಪಿನಲ್ಲಿದೆ.
310
ಇನ್ನು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಆ ಬಳಿಕ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
410
ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದ ಶಮಿ, ತಾವೆಸೆದ ಮೊದಲ ಚೆಂಡಿನಲ್ಲಿ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಹಾಗೂ ಕಿವೀಸ್ ಎದುರು 5 ವಿಕೆಟ್ ಗೊಂಚಲು ಪಡೆದರು. ಇದಾದ ಬಳಿಕ ಇಂಗ್ಲೆಂಡ್ ಎದುರು ಮಾರಕ ದಾಳಿ ನಡೆಸಿ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
510
ವಿಶ್ವಕಪ್ನಲ್ಲಿ ಕೇವಲ 13 ಪಂದ್ಯಗಳನ್ನಾಡಿರುವ ಶಮಿ 6 ಬಾರಿ 4+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದು, ಏಕದಿನ ವಿಶ್ವಕಪ್ನಲ್ಲಿ ಇದುವರೆಗೂ 40 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
610
ಇನ್ನು ಮೊಹಮ್ಮದ್ ಶಮಿ ಹಾಗೂ ಪತ್ನಿಯಾಗಿದ್ದ ಹಸಿನಾ ಜಹಾನ್ ನಡುವಿನ ವಿಚ್ಛೇದನಾ ಪ್ರಹಸನ ಗುಟ್ಟಾಗಿಯೇನೂ ಉಳಿದಿಲ್ಲ. ಶಮಿ ಜತೆಗಿನ ವಿಚ್ಛೇದನಕ್ಕೂ ಮುನ್ನ ಹಸಿನಾ ಜಹಾನ್, ಶಮಿ ಹಾಗೂ ಮತ್ತವರ ಕುಟುಂಬದ ಮೇಲೆ ನಾನಾ ಆರೋಪಗಳನ್ನು ಹೊರಿಸಿದ್ದರು.
710
ಈ ಪೈಕಿ ಶಮಿ ಹಲವು ಮಹಿಳೆಯರ ಜತೆ ಸಂಬಂಧ ಹೊಂದಿದ್ದಾರೆ. ಹಾಗೂ ಶಮಿ ಭಾರತಕ್ಕೆ ಮೋಸ ಮಾಡುವಂತಹ ಮ್ಯಾಚ್ ಫಿಕ್ಸಿಂಗ್ನಂತಹ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದರು.
810
ಪತ್ನಿಯ ನಿರಂತರ ಆರೋಪಗಳಿಂದ ಮನನೊಂದು ಮೊಹಮ್ಮದ್ ಶಮಿ ತಾವು 3 ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆಲ್ಲಾ ಯೋಚಿಸಿದ್ದಾಗಿ ಈ ಹಿಂದಿನ ಸಂದರ್ಶನವೊಂದರಲ್ಲಿ ತಮ್ಮ ನೋವು ಹಂಚಿಕೊಂಡಿದ್ದರು.
910
ಇನ್ನು ದೇಶದ್ರೋಹದಂತಹ ಆರೋಪದ ಬಗ್ಗೆ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶಮಿ, "ಇಂದಲ್ಲ, ಈ ಕ್ಷಣದಲ್ಲೇ ನನ್ನ ಮನಸ್ಸಿನಲ್ಲಿ ದೇಶಕ್ಕೆ ದ್ರೋಹ ಬಗೆಯಬೇಕು ಎಂದು ಅನಿಸಿದರೆ, ನಾನು ಆ ಕ್ಷಣದಲ್ಲೇ ಸಾಯಲು ಬಯಸುತ್ತೇನೆಯೇ ಹೊರತು. ದೇಶಕ್ಕೆ ದ್ರೋಹ ಬಗೆಯುವುದಿಲ್ಲ" ಎಂದು ಹೇಳಿದ್ದರು.
1010
2021ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋಲು ಕಂಡಾಗ ಕೆಲವು ಬುದ್ದಿಗೇಡಿ ನೆಟ್ಟಿಗರು ಶಮಿಯನ್ನು ಪಾಕಿಸ್ತಾನಿ ಏಜೆಂಟ್ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದರು. ಈಗ ಅದೇ ಶಮಿ ಏಕದಿನ ವಿಶ್ವಕಪ್ನಲ್ಲಿ ತಾನಾಡಿದ ಕೇವಲ 2 ಪಂದ್ಯದಲ್ಲೇ 9 ವಿಕೆಟ್ ಕಬಳಿಸಿ, ಭಾರತದ ಮಣ್ಣಿನ ಮಗ ಎನ್ನುವುದನ್ನು ಮತ್ತೊಮ್ಮೆ ಅನಾವರಣ ಮಾಡಿದ್ದಾರೆ.