ವಿರಾಟ್ ಕೊಹ್ಲಿಯನ್ನೂ ಬಿಟ್ಟಿಲ್ಲ ಕ್ರಿಕೆಟ್ ಲಂಚದ ಕರ್ಮಕಾಂಡ..!
First Published May 19, 2020, 6:16 PM ISTಕ್ರೀಡಾ ಲೋಕದ ಲಂಚಾವತಾರ ಪ್ರತಿಭಾನ್ವಿತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಬಿಟ್ಟಿರಲಿಲ್ಲ. ಈ ವಿಚಾರವನ್ನು ಸ್ವತಃ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಯ್ಬಿಟ್ಟಿದ್ದಾರೆ. ಡೆಲ್ಲಿ ಜೂನಿಯರ್ ತಂಡದಲ್ಲಿ ಸ್ಥಾನ ಪಡೆಯಲು ಅಧಿಕಾರಿಯೊಬ್ಬರು ನಮ್ಮ ಬಳಿ ಲಂಚ ಕೇಳಿದ್ದರು, ಆದರೆ ನಮ್ಮ ತಂದೆ ನಯಾ ಪೈಸೆ ನೀಡಲಿಲ್ಲ. ಹೀಗಾಗಿ ಜೂನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲನಾಗಿದ್ದೆ ಎಂದು ಹೇಳಿದ್ದಾರೆ.