ಹೀನಾಯ ಸೋಲಿಗೆ ಶ್ರೇಯಸ್‌ ತೀವ್ರ ಅಸಮಾಧಾನ; ತಂಡದ ಸೋಲಲು ಅವರು ಮಾಡಿದ ತಪ್ಪೇ ಕಾರಣ ಎಂದು ಪರೋಕ್ಷವಾಗಿ ಹೇಳಿದ ಅಯ್ಯರ್!

Published : Jul 10, 2026, 06:11 PM IST

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಸತತ ಸೋಲು ಕಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಆದರೂ ಇಂಗ್ಲೆಂಡ್‌ಗೆ ಭಾರತದ  ಭಾರಮೊತ್ತ ಸುಲಭದ ತುತ್ತಾಯಿತು. ಈ ಹಿನ್ನೆಯಲ್ಲಿ ಶ್ರೇಯಸ್‌ ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದಾರೆ. 

PREV
15
ಕಳಪೆ ಫಾರ್ಮ್‌ನಿಂದ ಹೊರ ಬಾರದ ಟೀಂ ಇಂಡಿಯಾ!

ಟೀಂ ಇಂಡಿಯಾ ಕಳಪೆ ಫಾರ್ಮನಿಂದ ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನು ಹೀನಾಯವಾಗಿ ಸೋತಿತು. ಈ ಹಿಂದೆ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ನಿರಸ ಪ್ರದರ್ಶನ ನೀಡಿ ಸರಣಿ ಸೋಲನುಭವಿಸಿತು. ಅಲ್ಲದೇ ನಿನ್ನೆ ಟೀಮ್ ಇಂಡಿಯಾ ನೀಡಿದ್ದ 159 ರನ್ ಗಳ ಗುರಿಯನ್ನು, ಇಂಗ್ಲೆಂಡ್ 13.5 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಇದರಲ್ಲಿ ಫಿಲ್ ಸಾಲ್ಟ್ ಅಜೇಯ 59 ರನ್, ಹ್ಯಾರಿ ಬ್ರೂಕ್ ಅಜೇಯ 79 ರನ್ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೇಯಸ್‌ ಕೆಲ ವಿಷಯದ ಕುರಿತು? ಹಾಗೂ ತಂಡದ ಚಲನ ವಲನಗಳ ಕುರಿತು ತೀವ್ರತರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

25
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದ ಭಾರತ!

ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಂತರ, ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 158/7 ರನ್ ಗಳಿಸಿತು. ಶ್ರೇಯಸ್ ಅಯ್ಯರ್ ಅವರ ಅಜೇಯ 80 ರನ್‌ಗಳನ್ನು ಹೊರತುಪಡಿಸಿ, ಯಾವುದೇ ಬ್ಯಾಟರ್‌ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧ 2 ಅಥವಾ ಅದಕ್ಕಿಂತ ಹೆಚ್ಚು ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಸೋತಿರುವುದು ಇದೇ ಮೊದಲು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಸತತ ಎರಡನೇ ಸರಣಿ ಸೋಲು ಇದಾಗಿದೆ.

35
ಸಾಲು-ಸಾಲು ಸೋಲಿಗೆ ಶರಣಾದ ಭಾರತ!

ಟಿ20 ವಿಶ್ವಕಪ್ ಗೆದ್ದ ನಂತರ, ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ನಾಯಕರನ್ನಾಗಿ ಮಾಡಲಾಯಿತು, ನಂತರ ಭಾರತ ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತಿತು ಮತ್ತು ಈಗ ತಂಡವು ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಟೀಮ್ ಇಂಡಿಯಾದ ಇತಿಹಾಸದಲ್ಲಿ ಸತತ 6 ಪಂದ್ಯಗಳ ನಂತರ ಒಂದೇ ಒಂದು ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಗೆಲ್ಲದಿರುವುದು ಇದೇ ಮೊದಲು. ಈ ಮುಜುಗರದ ಪ್ರದರ್ಶನದ ನಂತರ ತಂಡದ ನಾಯಕ ಶ್ರೇಯಸ್ ಅಯ್ಯರ್ ತುಂಬಾ ಅಸಮಾಧಾನಗೊಂಡಿದ್ದಾರೆ.

45
ಮತ್ತೊಂದು ನಿರಾಶಾದಾಯಕ ಪ್ರದರ್ಶನ!

ನಾಯಕ ಶ್ರೇಯಸ್ ಅಯ್ಯರ್ ತಂಡದ ಬೌಲರ್‌ಗಳು ಮತ್ತು ಯುವ ಆಟಗಾರರ ಪ್ರದರ್ಶನ ಕುರಿತಾಗಿ ಅಸಮಾಧಾನಗೊಂಡರು. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಪಿಚ್‌ನ ಸರಿಯಾದ ಲೆಂಗ್ತ್‌ನಲ್ಲಿ ದಾಳಿ ಮಾಡಲು ವಿಫಲರಾದ ಬೌಲಿಂಗ್ ವಿಭಾಗದ ಶಿಸ್ತಿನ ಕೊರತೆ ಅವರು ಎತ್ತಿ ತೋರಿಸಿದ್ದಾರೆ. 

55
ಶ್ರೇಯಸ್‌ ಹೇಳಿದ್ದೇನು?

ತಂಡವು ಸದ್ಯ ಹಿರಿಯ ಆಟಗಾರರಿಂದ ಯುವ ಆಟಗಾರರ ಪರಿವರ್ತನಾ ಹಂತದಲ್ಲಿದೆ ಎಂದು ಒಪ್ಪಿಕೊಂಡಿರುವ ಅವರು, ಹೊಸ ಆಟಗಾರರು ಒತ್ತಡದ ಸಂದರ್ಭಗಳಲ್ಲಿ ತಪ್ಪುಗಳನ್ನು ಪುನರಾವರ್ತಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೇಯಸ್ ವೈಯಕ್ತಿಕವಾಗಿ ಉತ್ತಮ ರನ್ ಗಳಿಸಿದರೂ, ಬೌಲರ್‌ಗಳು ಯೋಜನೆಯನ್ನು ಮೈದಾನದಲ್ಲಿ ಸರಿಯಾಗಿ ಜಾರಿಗೊಳಿಸದ ಕಾರಣ ತಂಡಕ್ಕೆ ಗೆಲುವು ಸಿಗಲಿಲ್ಲ. ಅಂತಿಮವಾಗಿ, ಈ ಯುವ ಆಟಗಾರರು ತಮ್ಮ ತಪ್ಪುಗಳಿಂದ ಪಾಠ ಕಲಿತು, ಪರಿಸ್ಥಿತಿಗೆ ಬೇಗನೆ ಹೊಂದಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories