ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮದ ಬೆನ್ನಲ್ಲೇ, ಆರ್ಸಿಬಿ ತಂಡದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಬಸು ಶಂಕರ್ ನಿವೃತ್ತಿ ಘೋಷಿಸಿದ್ದಾರೆ. ತಂಡದ ಯಶಸ್ಸಿನಲ್ಲಿ, ವಿಶೇಷವಾಗಿ ವಿರಾಟ್ ಕೊಹ್ಲಿಯವರ ಫಿಟ್ನೆಸ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಐಪಿಎಲ್ 202ರ ಸೀಸನ್ನಲ್ಲಿ ಭರ್ಜರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಬಸು ಶಂಕರ್ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿಯು ಬುಧವಾರ ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯ ಮೂಲಕ ಈ ವಿಷಯವನ್ನು ಖಚಿತಪಡಿಸಿದೆ.
26
ಆರ್ಸಿಬಿ ಫ್ರಾಂಚೈಸಿಯ ಭಾವುಕ ಪೋಸ್ಟ್
"ಬಸು ಶಂಕರ್ ಸರ್... ನೀವು ತೆಗೆದುಕೊಂಡಿರುವ ಈ ನಿವೃತ್ತಿಯ ನಿರ್ಧಾರವು ನಮ್ಮೆಲ್ಲರ ಕಣ್ಣುಗಳಲ್ಲಿ ನೀರು ತರಿಸಿದೆ. ಈ ಸೀಸನ್ನ ಮಹಾನ್ ಯಶಸ್ಸಿನಲ್ಲಿ ನಿಮ್ಮ ಪಾತ್ರ ಅತ್ಯಮೂಲ್ಯವಾದದ್ದು. ಈ ಗೆಲುವು ತೆರೆಮರೆಯಲ್ಲಿ ನೀವು ಪಟ್ಟ ಲೆಕ್ಕವಿಲ್ಲದಷ್ಟು ಗಂಟೆಗಳ ಕಠಿಣ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಈ ಯಶಸ್ಸಿನ ಭಾಗವಾಗಿರುವ ನಮ್ಮೆಲ್ಲಾ ಸಪೋರ್ಟ್ ಸ್ಟಾಫ್ ಹಾಗೂ ಮ್ಯಾನೇಜ್ಮೆಂಟ್ ಸದಸ್ಯರಿಗೆ ಧನ್ಯವಾದಗಳು" ಎಂದು ಆರ್ಸಿಬಿ ಸಂಸ್ಥೆಯು 'ಎಕ್ಸ್' ಅಕೌಂಟ್ನಲ್ಲಿ ಅತ್ಯಂತ ಭಾವುಕವಾಗಿ ಬರೆದುಕೊಂಡಿದೆ.
36
ಎಂಟು ಸೀಸನ್ಗಳ ಸುದೀರ್ಘ ಸೇವೆ
ಬಸು ಶಂಕರ್ ಅವರು ಕಳೆದ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಅಲ್ಲಿಂದ ಸತತವಾಗಿ ಎಂಟು ಸೀಸನ್ಗಳ ಕಾಲ ಅವರು ತಂಡಕ್ಕೆ ತಮ್ಮ ಅದ್ಭುತ ಸೇವೆಯನ್ನು ಸಲ್ಲಿಸಿದ್ದಾರೆ.
ಬೆಂಗಳೂರು ತಂಡವು ಐಪಿಎಲ್ನಲ್ಲಿ ಸತತವಾಗಿ ಎರಡು ಬಾರಿ ವಿನ್ನರ್ ಆಗಿ ಹೊರಹೊಮ್ಮುವಲ್ಲಿ ಬಸು ಶಂಕರ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಆಟಗಾರರಿಗೆ ವಿವಿಧ ರೀತಿಯ ಕಠಿಣ ವ್ಯಾಯಾಮಗಳನ್ನು ಮಾಡಿಸುತ್ತಾ, ಅವರ ದೈಹಿಕ ಸಾಮರ್ಥ್ಯ ಹಾಗೂ ಫಿಟ್ನೆಸ್ ಅನ್ನು ಹೆಚ್ಚಿಸುವಲ್ಲಿ ಅವರು ತೆರೆಮರೆಯಲ್ಲಿ ಅಸಾಧಾರಣ ಪಾತ್ರವನ್ನು ಪೋಷಿಸಿದ್ದರು.
56
ಟೀಮ್ ಇಂಡಿಯಾದಲ್ಲಿ 'ಯೋ-ಯೋ' ಟೆಸ್ಟ್ ತಂದ ಖ್ಯಾತಿ
ಆರ್ಸಿಬಿ ತಂಡಕ್ಕೆ ಸೇರುವ ಮುನ್ನ ಬಸು ಶಂಕರ್ ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ (Team India) ಹೆಡ್ ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಭಾರತೀಯ ಕ್ರಿಕೆಟ್ನಲ್ಲಿ ಕಡ್ಡಾಯ ಫಿಟ್ನೆಸ್ ಮಾನದಂಡವಾದ ಪ್ರಸಿದ್ಧ 'ಯೋ-ಯೋ' (Yo-Yo) ಟೆಸ್ಟ್ ಅನ್ನು ಪರಿಚಯಿಸಿ, ಹೆಚ್ಚು ಪ್ರಚಲಿತಕ್ಕೆ ತಂದ ಕೀರ್ತಿ ಇವರಿಗೇ ಸಲ್ಲುತ್ತದೆ. ಟೀಮ್ ಇಂಡಿಯಾವನ್ನು ವಿಶ್ವದ ಅತ್ಯಂತ ಫಿಟ್ ಆದ ವೃತ್ತಿಪರ ತಂಡವಾಗಿ ಪರಿವರ್ತಿಸಿದ ಹೆಗ್ಗಳಿಕೆ ಇವರದ್ದಾಗಿದೆ.
66
ವಿರಾಟ್ ಕೊಹ್ಲಿ ಫಿಟ್ನೆಸ್ ಸಕ್ಸಸ್ ಹಿಂದಿನ ಶಕ್ತಿ
ವಿಶ್ವ ಕ್ರಿಕೆಟ್ನ ದೈತ್ಯ ಆಟಗಾರ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಇಂದಿನ ಅಸಾಧಾರಣ ಫಿಟ್ನೆಸ್ ಮತ್ತು ಸಕ್ಸಸ್ ಹಿಂದೆ ಬಸು ಶಂಕರ್ ಅವರ ಶ್ರಮ ಹಾಗೂ ಮಾರ್ಗದರ್ಶನವಿದೆ. ಕ್ರಿಕೆಟಿಗರ ಫಿಟ್ನೆಸ್ ಮಂತ್ರವನ್ನೇ ಬದಲಿಸಿದ ಈ ಗುರು ಇದೀಗ ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ವಿದಾಯ ಹೇಳಿರುವುದು ಕ್ರೀಡಾಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.