ಇನ್ನು ಇದೇ ವೇಳೆ ನೆಟ್ಟಿಗರೊಬ್ಬರು, ಸರ್ ಬಾಲ್ಯದ ದಿನಗಳಿಂದಲೂ ನಾನು ನಿಮಗೊಂದು ಪ್ರಶ್ನೆ ಕೇಳಬೇಕೆಂದಿದ್ದೆ. 1997ರಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯವು ಮಳೆಯಿಂದ ರದ್ದಾಗಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಸ್ಕ್ವೇರ್ ಕಟ್ ಬಾರಿಸಿದರು, ಅದನ್ನು ನೀವು ಕ್ಯಾಚ್ ಹಿಡಿದುಕೊಂಡ್ರಿ. ನನಗನಿಸುತ್ತೆ ಆಗ ಚೆಂಡು ನೆಲಕ್ಕೆ ತಾಗಿತ್ತು ಎಂದು. ನಿಮಗೆ ಅದು ನೆನಪಿದ್ರೆ ದಯವಿಟ್ಟು ಈಗಾಲಾದರೂ ಹೇಳಿ ಚೆಂಡು ನೆಲಕ್ಕೆ ತಾಗಿತ್ತೇ ಅಥವಾ ಇಲ್ಲವೇ ಎಂದು ಕೇಳಿದ್ದಾರೆ.