ಐದು ಟೆಸ್ಟ್ಗಳ ಸರಣಿಯಲ್ಲಿ ಭಾರತ ಈಗ ಒತ್ತಡದಲ್ಲಿದೆ. ಎರಡು ಟೆಸ್ಟ್ಗಳನ್ನ ಸೋತ ಮೇಲೆ, ಉಳಿದ ಪಂದ್ಯಗಳು ತುಂಬಾ ಮುಖ್ಯವಾಗಿವೆ. ಹೀಗಾಗಿ ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ.
ಕರುಣ್ ನಾಯರ್ಗೆ ಚಾನ್ಸ್ ಸಿಕ್ಕಿದ್ರೂ, ಅದನ್ನ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. 6 ಇನ್ನಿಂಗ್ಸ್ಗಳಲ್ಲಿ ಕೇವಲ 140 ರನ್ ಮಾಡಿದ್ದಾರೆ. 2016ರಲ್ಲಿ ಟ್ರಿಪಲ್ ಸೆಂಚುರಿ ಹೊಡೆದ ನಾಯರ್ ಈಗ ಫಾರ್ಮ್ನಲ್ಲಿ ಇಲ್ಲ. ಹೀಗಾಗಿ ಮಾಂಚೆಸ್ಟರ್ ಟೆಸ್ಟ್ನಲ್ಲಿ ಅವರ ಸ್ಥಾನ ಪಡೆಯೋದು ಡೌಟ್.
25
ಈಶ್ವರನ್ಗೆ ಚಾನ್ಸ್ ಸಿಗುತ್ತಾ?
ಅಭಿಮನ್ಯು ಈಶ್ವರನ್ ಹೆಸರು ಈಗ ಚರ್ಚೆಯಲ್ಲಿದೆ. 103 ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 7,841 ರನ್, 27 ಸೆಂಚುರಿ, 31 ಅರ್ಧಶತಕಗಳೊಂದಿಗೆ 48.70 ಸರಾಸರಿ ಹೊಂದಿರುವ ಈಶ್ವರನ್ ಟೆಸ್ಟ್ಗೆ ಸೂಕ್ತ ಆಯ್ಕೆ.
35
ಗಂಭೀರ್ ಹೊಸ ಪ್ಲಾನ್?
ಕೋಚ್ ಗೌತಮ್ ಗಂಭೀರ್ ಈ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬಹುದು. ಮಧ್ಯಮ ಕ್ರಮಾಂಕದಲ್ಲಿ ಒಬ್ಬ ಭರವಸೆಯ ಆಟಗಾರ ಬೇಕಾಗಿದೆ. ಹೀಗಾಗಿ ಕರುಣ್ ಬದಲು ಈಶ್ವರನ್ಗೆ ಚಾನ್ಸ್ ಸಿಗಬಹುದು.
ಈ ಪಂದ್ಯ ಸೋತರೆ ಸರಣಿ ಕೈ ತಪ್ಪುತ್ತದೆ. ಉಳಿದ ಎರಡು ಟೆಸ್ಟ್ ಗೆಲ್ಲಬೇಕಾದರೆ, ಮಾಂಚೆಸ್ಟರ್ನಲ್ಲಿ ಗೆಲ್ಲಲೇಬೇಕು. ಹೀಗಾಗಿ ಆಟಗಾರರ ಆಯ್ಕೆ ಮತ್ತು ಪ್ರದರ್ಶನ ಮುಖ್ಯ.
55
ಈಶ್ವರನ್ ಮೇಲೆ ನಿರೀಕ್ಷೆ
ಅಭಿಮನ್ಯು ಈಶ್ವರನ್ ಸ್ಥಿರ ಆಟ ಮತ್ತು ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಭಾರತಕ್ಕೆ ಬಲ ತರಬಹುದು. ಟೆಸ್ಟ್ನಲ್ಲಿ ಆಡದ ಈಶ್ವರನ್ಗೆ ಮಾಂಚೆಸ್ಟರ್ ಒಳ್ಳೆಯ ಅವಕಾಶ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.