Cricket: ಇದು ಯಾವ ಸೀಮೆ ಸೆಲೆಕ್ಷನ್? ಅಶ್ವಿನ್ ಹೇಳಿದ ಆ ಮಾತು ನಿಜವಾಯ್ತಾ! ಕಡೆಗೂ ಆ ಭಾವುಕತೆ, ಆಕ್ರೋಶಕ್ಕೆ ಸಾಕ್ಷಿಯಾಯ್ತಾ ಈ ಸ್ಕ್ವಾಡ್!

Published : Sep 17, 2026, 07:42 PM IST

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಪ್ರಕಟಿಸಿದ ಭಾರತೀಯ ತಂಡದ ಆಯ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಶ್ವಿನ್‌ ಹೇಳಿದ ಆ ಒಂದು ಮಾತು ನಿಜವಾಗಿಯೇ ಹೋಯ್ತಾ? ಅಷ್ಟಕ್ಕೂ ಆ ಮಾತೇನು?

PREV
15
ಏನಿದು ಆಕ್ರೋಶ!

ಸೆಪ್ಟೆಂಬರ್ 16ರಂದು ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಭಾರತೀಯ ತಂಡವನ್ನು ಪ್ರಕಟಿಸಿತು. ಶುಭಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರು ಮೈದಾನಕ್ಕೆ ಮರಳುತ್ತಿದ್ದಾರೆ ಎಂಬುದು ನಿಜ. ಆದರೆ, ಈ ತಂಡದ ಆಯ್ಕೆ ಪಟ್ಟಿಯನ್ನು ನೋಡಿದಾಗ ಪ್ರತಿಯೊಬ್ಬ ನಿಜವಾದ ಕ್ರಿಕೆಟ್ ಅಭಿಮಾನಿಯ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಒಂದೇ ಒಂದು ಪ್ರಶ್ನೆ ಏನೆಂದರೆ? ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರೇ, ಇದು ಯಾವ ಸೀಮೆ ಸೆಲೆಕ್ಷನ್? ಇದು ಅಜಿತ್ ಅಗರ್ಕರ್ ಅವರ ನೇತೃತ್ವದ ಆಯ್ಕೆ ಸಮಿತಿಯ ಕೊನೆಯ ಸಭೆ ಇರಬಹುದು. ಭಾರತ ತಂಡಕ್ಕಾಗಿ ಅವರು ಮಾಡುತ್ತಿರುವ ಕೊನೆಯ ಸೆಲೆಕ್ಷನ್ ಇದಾಗಿರಬಹುದು. ಆದರೆ, ದೇಶಕ್ಕಾಗಿ ಆಡಿದ ಅನುಭವಿ ಆಟಗಾರರನ್ನು ಸೈಲೆಂಟ್ ಆಗಿ ಮೂಲೆಗೆ ತಳ್ಳುತ್ತಿರುವ ಈ ಧೋರಣೆ ಇದೆಯಲ್ಲ, ಅದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಭಾವುಕತೆ ಮತ್ತು ಆಕ್ರೋಶ ಹುಟ್ಟುಹಾಕಿದೆ.

25
ಈ ಹಿಂದೆ ಅಶ್ವಿನ್‌ ಹೇಳಿದ್ದೇನು?

ಇದೇ ಸನ್ನಿವೇಶವನ್ನು ಮುಂದಿಟ್ಟುಕೊಂಡು ಭಾರತದ ಹಿರಿಯ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಹಿಂದೆ ಆಡಿದ ಕಟು ಮಾತುಗಳು ನಿನ್ನೆ ಪ್ರಕಟವಾದ ಸ್ಕ್ವಾಡ್ ಮೂಲಕ ಶೇ. 100% ನಿಜವಾಗಿ ಕಣ್ಣೆದುರು ನಿಂತಿವೆ. ಅಶ್ವಿನ್ ಹೇಳಿದ್ದರು: ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್‌ಗಳನ್ನು ತಂಡದಿಂದ ಕೈಬಿಟ್ಟರೆ 10 ಜನ ಕೇಳ್ತಾರೆ, 100 ಜನ ಕೇಳ್ತಾರೆ, ಹೆಚ್ಚೆಂದರೆ 10,000 ಜನ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಾರೆ, ಅಷ್ಟೇ! ಯಾರೂ ಬೀದಿಗೆ ಇಳಿದು ಗಲಾಟೆ ಮಾಡಲ್ಲ. ಅದೇ ಬೌಲರ್‌ಗಳಿಗಾಗಿಯೂ ಜನ ಸೌಂಡ್ ಮಾಡೋ ದಿನ ಬಂದರೆ, ಅವರನ್ನು ಡ್ರಾಪ್ ಮಾಡೋದು ಅಸಾಧ್ಯವಾಗುತ್ತದೆ ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಿಂದ ತೆಗೆದುಹಾಕುವುದು ಎಷ್ಟು ಅಸಾಧ್ಯವೋ ಹಾಗೆ!

35
100ಕ್ಕೆ ನೂರು ನಿಜವಾಯ್ತಾ ಆ ಮಾತು?

ಅಶ್ವಿನ್ ಅವರ ಈ ಮಾತು ಕೇವಲ ಒಂದು ಹೇಳಿಕೆಯಾಗಿರಲಿಲ್ಲ, ಅದು ಈ ಕ್ರಿಕೆಟ್ ವ್ಯವಸ್ಥೆಯ ಕಟು ವಾಸ್ತವವಾಗಿತ್ತು. ನಿನ್ನೆಯ ಸ್ಕ್ವಾಡ್ ಲಿಸ್ಟ್ ನೋಡಿ! ಒಂದೆಡೆ ಮೊಹಮ್ಮದ್ ಶಮಿ ದುಲೀಪ್ ಟ್ರೋಫಿಯಲ್ಲಿ ಸಾಲು ಸಾಲು ಸುದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡಿ ವಿಕೆಟ್ ಉಡಾಯಿಸುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್‌ನೆಸ್ ಸಾಬೀತುಪಡಿಸುತ್ತಿದ್ದರೂ ವೆಸ್ಟ್ ಇಂಡೀಸ್ ಸರಣಿಯ ಸ್ಕ್ವಾಡ್‌ನಲ್ಲಿ ಅವರ ಹೆಸರೇ ಇಲ್ಲ! ಇನ್ನೊಂದೆಡೆ ಭುವನೇಶ್ವರ್ ಕುಮಾರ್... ಒಡಿಐ ಇರಲಿ, ಟಿ20 ಇರಲಿ, ಆಡಿದ್ದನ್ನೆಲ್ಲಾ 'ಗೋಲ್ಡ್' ಮಾಡುತ್ತಿದ್ದಾರೆ! ಐಪಿಎಲ್‌ನ ಕೊನೆಯ ಎರಡು ಸೀಸನ್‌ಗಳಲ್ಲಿ ಬರೋಬ್ಬರಿ 45 ವಿಕೆಟ್‌ಗಳು (28 ಮತ್ತು 17), ಇತ್ತೀಚಿನ ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡವನ್ನು ತಮ್ಮ ವಿಕೆಟ್‌ಗಳ ಮೂಲಕವೇ ಫೈನಲ್‌ಗೆ ಕರೆದೊಯ್ದ ಸೈಲೆಂಟ್ ಹೀರೋ! ಆದರೂ ಈ ಇಬ್ಬರೂ ದಿಗ್ಗಜ ಬೌಲರ್‌ಗಳಿಗೆ ಈ ಒಡಿಐ ತಂಡದಲ್ಲಿ ಜಾಗವಿಲ್ಲ.

45
ಈ ಸೆಲೆಕ್ಷನ್ ವಿಚಿತ್ರ!

ಬ್ಯಾಟಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲೂ ಪರ್ಫಾರ್ಮ್ ಮಾಡಿದ ಆಟಗಾರರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಐಪಿಎಲ್‌ನಲ್ಲಿ ಬರೋಬ್ಬರಿ 501 ರನ್ ಚಚ್ಚಿ, ತನ್ನ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ರಜತ್ ಪಟಿದಾರ್‌ಗೆ ಯಾವುದೇ ಅವಕಾಶವಿಲ್ಲ. ಇನ್ನು ಐಪಿಎಲ್ ಫೈನಲ್‌ನಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಆಗಿದ್ದ ಕೃಣಾಲ್ ಪಾಂಡ್ಯ ಕಥೆಯೇನು? ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಲಭ್ಯವಿಲ್ಲದಿದ್ದರೂ ಕೃಣಾಲ್ ಪಾಂಡ್ಯ ಹೆಸರು ಸೆಲೆಕ್ಟರ್ಸ್ ಕಣ್ಣಿಗೆ ಕಾಣಿಸಲಿಲ್ಲ. ಆದರೆ, ಆಕಿಬ್ ನಬೀ ಮತ್ತು ಗುರ್ನೂರ್ ಬ್ರಾರ್ ಅವರಂತಹ ಯುವ ಆಟಗಾರರು ನೇರವಾಗಿ ಭಾರತೀಯ ತಂಡದ ಒಳಗೆ ಬಂದುಬಿಡುತ್ತಾರೆ! ಯಾವ ಆಧಾರದ ಮೇಲೆ, ಯಾವ ಮಾನದಂಡದ ಮೇಲೆ ಈ ಆಯ್ಕೆ ನಡೆಯುತ್ತಿದೆ? ಮೈದಾನದಲ್ಲಿ ಶ್ರಮವಹಿಸಿ ಪರ್ಫಾರ್ಮ್ ಮಾಡುವ ಆಟಗಾರರಿಗೆ ಸಿಗುತ್ತಿರುವ ಪ್ರತಿಫಲ ಇದೇನಾ?

55
ಆ ಉಡಾಫೆ ಧೋರಣೆ ಏನು?

ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಸಿಗುವ 'ಸ್ಟಾರ್ ಕ್ರೇಜ್' ಮತ್ತು ಸಾರ್ವಜನಿಕ ಬೆಂಬಲ ಪಂದ್ಯ ಗೆಲ್ಲಿಸಿಕೊಡುವ ಬೌಲರ್‌ಗಳಿಗೆ ಸಿಗುತ್ತಿಲ್ಲ ಎಂಬುದೇ ಆಯ್ಕೆಗಾರರ ಈ ಉಡಾಫೆಗೆ ಮುಖ್ಯ ಕಾರಣ. ವಿರಾಟ್ ಅಥವಾ ರೋಹಿತ್ ಅವರನ್ನು ಹೊರಗಿಟ್ಟರೆ ಜನಾಕ್ರೋಶ ವ್ಯಕ್ತವಾಗುತ್ತದೆ ಎಂಬ ಭಯ ಸೆಲೆಕ್ಟರ್ಸ್‌ಗೆ ಇದೆ, ಆದರೆ ಶಮಿ ಅಥವಾ ಭುವಿ ಅವರಂತಹ ಶಾಂತ ಆಟಗಾರರನ್ನು ಹೊರಗಿಟ್ಟರೆ ಯಾರೂ ಕೇಳುವುದಿಲ್ಲ ಎಂಬ ನಿರ್ಲಕ್ಷ್ಯ ಅವರಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories