ಇನ್ನು ಪಂದ್ಯ ಮುಕ್ತಾಯದ ಬಳಿಕ, ಕೊನೆಯ ಓವರ್ ಅನ್ನು ಅಕ್ಷರ್ ಪಟೇಲ್ಗೆ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಉತ್ತರ ನೀಡಿದ್ದು, ನಾವು ಪಂದ್ಯವನ್ನು ಸೋತಿದ್ದರೂ ಅಷ್ಟೇನೂ ಯೋಚಿಸುತ್ತಿರಲಿಲ್ಲ. ಯಾಕೆಂದರೇ ಬೇರೆ ಬೇರೆ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎನ್ನುವುದರ ಅರಿವು ಮೂಡಿಸಬೇಕಿತ್ತು. ಯಾಕೆಂದರೇ ಈ ರೀತಿ ಮಾಡುವುದರಿಂದ ದೊಡ್ಡ ಪಂದ್ಯಗಳನ್ನಾಡುವಾಗ ಇದು ನೆರವಿಗೆ ಬರುತ್ತದೆ.