ಭಾರತ್ ಲಾಕ್ಡೌನ್: ಬಡವರ ಮನೆಗೆ ತೆರಳಿ ಉಚಿತ ಹಾಲು ವಿತರಿಸಿದ ಸಿಎಂ ಯಡಿಯೂರಪ್ಪ
First Published Apr 2, 2020, 10:45 AM ISTಬೆಂಗಳೂರು(ಏ.02): ನಗರದ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು(ಗುರುವಾರ) ಚಾಲನೆ ನೀಡಿದ್ದಾರೆ. ಕೊರೋನಾ ಸೋಂಕು ಹರಡದಿರಲು ಇಡೀ ದೇಶವೇ ಲಾಕ್ಡೌನ್ ಆಗಿದೆ. ಹೀಗಾಗಿ ಜನರು ಮನೆ ಬಿಟ್ಟು ಹೊರಗಡೆ ಬರದಿರಲಿ ಎಂಬ ಕಾರಣಕ್ಕೆ ಬಡವರಿಗೆ ಉಚಿತವಾಗಿ ಹಾಲು ವಿತರಿಸಲು ನಿರ್ಧರಿಸಲಾಗಿದೆ.